ಚಿಕ್ಕಮಗಳೂರು: ಪತ್ನಿಯ ತಂಗಿಯೊಂದಿಗೆ ಅಕ್ರಮ ಸಂಬಂಧ, ಅತ್ಯಾಚಾರ ಆರೋಪದ ಮೇರೆಗೆ ಜಿಲ್ಲೆಯ ಕೊಪ್ಪ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯರಾಮ್ (51) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜಯರಾಮ್ ಪತ್ನಿ ತಿಮ್ಮಕ್ಕ ಅಲಿಯಾಸ್ ಲತಾ ಅವರ ತಂಗಿ ಕೊಪ್ಪ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‘ಮದುವೆಯಾಗುವುದಾಗಿ ನಂಬಿಸಿ ಜಯರಾಮ್ ಅತ್ಯಾಚಾರ ಎಸಗಿದ್ದಾರೆ. ಈ ಹಿಂದೆ ಜಯರಾಮ್ ಪಾವಗಡದಲ್ಲಿ ಇದ್ದಾಗ ಅವರ ಮನೆಯಲ್ಲಿ ಇದ್ದೆ. ಅವರ ಮನೆಯಿಂದ ಆಂಧ್ರಪ್ರದೇಶದ ಮಡಕಶಿರ ಸರ್ಕಾರಿ ಕಾಲೇಜಿಗೆ ಓಡಾಡುತ್ತಿದ್ದೆ. ಆ ಸಂದರ್ಭದಲ್ಲಿ ಆಗಾಗ್ಗೆ ಅತ್ಯಾಚಾರ ಮಾಡಿದ್ದರು. ದ್ವಿತೀಯ ಪಿಯುನಲ್ಲಿ ಫೇಲಾಗಿದ್ದರಿಂದ ನಮ್ಮ ಊರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗಾಕ್ಕೆ ವಾಪಸ್ಸಾಗಿದ್ದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕುಟುಂಬದವರು ಧರ್ಮಸ್ಥಳದಲ್ಲಿ ಜಯರಾಮ್ ಅವರೊಂದಿಗೆ ಗಾಂಧರ್ವ ವಿವಾಹ ಮಾಡಿಸಿದ್ದರು. ಏಪ್ರಿಲ್ ತಿಂಗಳಿನಲ್ಲಿ ಕೊಪ್ಪಕ್ಕೆ ಹೋದಾಗ ಅಕ್ಕ ತಿಮ್ಮಕ್ಕ ಮನೆಯೊಳಗೆ ಬಿಟ್ಟುಕೊಳ್ಳದೆ, ಹೊಡೆದು ಹೊರ ಹಾಕಿದ್ದಾರೆ. ವಂಚನೆ ಮಾಡಿರುವ ಜಯರಾಮ್ ಮತ್ತು ಹಲ್ಲೆ ಮಾಡಿರುವ ಅಕ್ಕ ತಿಮ್ಮಕ್ಕ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಿದ್ದಾರೆ. ಆರೋಪಿ ಜಯರಾಮ್ ಅವರನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಲಾಗಿದೆ. ಆರೋಪಿ ತಿಮ್ಮಕ್ಕ ತಲೆಮರೆಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.