ADVERTISEMENT

ಕೊಲ್ಲೂರಿನಲ್ಲಿ 19 ಸೆಂ.ಮೀ.ಮಳೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 19:59 IST
Last Updated 8 ಜುಲೈ 2013, 19:59 IST

ಬೆಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದೆ. ಕೊಲ್ಲೂರಿನಲ್ಲಿ 19 ಸೆಂ.ಮೀ.ಮಳೆಯಾಗಿದೆ.

ಸಿದ್ದಾಪುರ, ಭಟ್ಕಳ, ಕಾರವಾರ, ವಿಜಾಪುರ 11, ಶಿರಾಲಿ, ಹೊನ್ನಾವರ, ಕುಮಟಾ 10, ಮೂಡುಬಿದಿರೆ, ಪುತ್ತೂರು, ಕೋಟ, ಕದ್ರಾ, ನೀಲ್ಕುಂದ 9, ಕಾರ್ಕಳ, ಅಂಕೋಲ 8, ಮಾಣಿ, ಕುಂದಾಪುರ, ಗೇರುಸೊಪ್ಪ, ಕ್ಯಾಸಲ್ ರಾಕ್‌ನಲ್ಲಿ 7 ಸೆಂ.ಮೀ.ಮಳೆಯಾಗಿದೆ.

ಬಂಟ್ವಾಳ, ಉಡುಪಿ, ಯಲಬುರ್ಗ 6, ಹೊಸನಗರ, ಆಗುಂಬೆ 5, ಬಸವನ ಬಾಗೇವಾಡಿ, ಮಾನ್ವಿ, ಭಾಗಮಂಡಲ 4, ಮಂಗಳೂರು, ಉಪ್ಪಿನಂಗಡಿ, ಪಣಂಬೂರು, ಜೋಯಿಡಾ, ಸಿದ್ದಾಪುರ (ಉ.ಕ), ಮುನಿರಾಬಾದ್, ಮಡಿಕೇರಿ, ಹುಂಚದಕಟ್ಟೆ, ಶೃಂಗೇರಿ, ಕಮ್ಮರಡಿ, ಹೊಸಪೇಟೆ 3, ಸುಬ್ರಹ್ಮಣ್ಯ, ಯಲ್ಲಾಪುರ, ಮುಧೋಳ, ಸಿಂಧನೂರು, ಮೂರ್ನಾಡು, ನಾಪೋಕ್ಲು, ತಾಳಗುಪ್ಪ, ತೀರ್ಥಹಳ್ಳಿ, ಜಯಪುರ, ಕೊಪ್ಪ, ಕಂಪ್ಲಿ 2, ಬೆಳ್ತಂಗಡಿ, ಲೋಂಡ, ಸವಣೂರು, ರೋಣ, ಗಂಗಾವತಿ, ಬೀಳಗಿ, ಜಮಖಂಡಿ, ಮುದ್ದೆಬಿಹಾಳ, ತಾಳಿಕೋಟೆ, ಆಳಂದ, ಚಿಂಚೋಳಿ, ಸೋಮವಾರಪೇಟೆ, ಸಾಗರ, ಅರಸಾಳು, ಕಳಸ, ಬಾಳೆಹೊನ್ನೂರಿನಲ್ಲಿ ತಲಾ 1 ಸೆಂ.ಮೀ.ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಹಲವೆಡೆ ಮತ್ತು ದಕ್ಷಿಣ ಒಳನಾಡಿನ ಘಟ್ಟ ಪ್ರದೇಶದ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.