ಚಿಕ್ಕಮಗಳೂರು: ಲೇವಾದೇವಿದಾರ ಮತ್ತು ನಗರಸಭೆ ಮಾಜಿ ಸದಸ್ಯ ಸಿ.ಜೆ.ವಿಶ್ವನಾಥ್ (ಕೋಟೆ ಶಿವಣ್ಣ) ಅವರ ಮನೆ, ಫೈನಾನ್ಸ್ ಮತ್ತು ವೈನ್ ಶಾಪ್ಗಳಿಗೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಶನಿವಾರ ದಾಳಿ ಮಾಡಿದ್ದಾರೆ.
ಚೆನ್ನಾಪುರ ರಸ್ತೆಯ ಮನೆ, ತೊಗರಿಯ ಹಂಕಲ್ ವೃತ್ತ ಮತ್ತು ಹಿರೇಮಗಳೂರಿನ ವೈನ್ ಶಾಪ್, ಆಜಾದ್ ಪಾರ್ಕ್ ವೃತ್ತದಲ್ಲಿ ಫೈನಾನ್ಸ್ ಕಚೇರಿಗೆ ಏಕಕಾಲಕ್ಕೆ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಅಧಿಕಾರಿಗಳು ದಾಖಲೆಗಳು, ಬ್ಯಾಂಕ್ ಖಾತೆ ವಿವರ ಮೊದಲಾದವುಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ರಾತ್ರಿ 9 ಗಂಟೆಯಾದರೂ ದಾಖಲೆ ಪರಿಶೀಲನೆ ಮುಂದುವರಿದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.