ADVERTISEMENT

‘ಚಂದ್ರಿಕಾ’ ಮಂಗಲ ಮಹೋತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 19:30 IST
Last Updated 2 ಜೂನ್ 2018, 19:30 IST
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ‘ಚಂದ್ರಿಕಾ ಮಂಗಲ ಮಹೋತ್ಸವ’ದಲ್ಲಿ ಚಂದ್ರಿಕಾ ಗ್ರಂಥ ಅಧ್ಯಯನ ಮಾಡಿದ ಆಚಾರ್ಯರು ಮಠಾಧೀಶರ ಸಮ್ಮುಖದಲ್ಲಿ  ಅನುವಾದ ಒಪ್ಪಿಸಿದರು
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ‘ಚಂದ್ರಿಕಾ ಮಂಗಲ ಮಹೋತ್ಸವ’ದಲ್ಲಿ ಚಂದ್ರಿಕಾ ಗ್ರಂಥ ಅಧ್ಯಯನ ಮಾಡಿದ ಆಚಾರ್ಯರು ಮಠಾಧೀಶರ ಸಮ್ಮುಖದಲ್ಲಿ ಅನುವಾದ ಒಪ್ಪಿಸಿದರು   

ರಾಯಚೂರು: ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ‘ಚಂದ್ರಿಕಾ’ ಗ್ರಂಥದ ಬೋಧನೆ ಪಡೆದ ಆಚಾರ್ಯರನ್ನು ವಿದ್ವಾಂಸರು ಪರೀಕ್ಷೆ ಮಾಡುವ ಎರಡು ದಿನಗಳ ‘ಚಂದ್ರಿಕಾ ಮಂಗಲ ಮಹೋತ್ಸವ’ ಶನಿವಾರ ಆರಂಭವಾಯಿತು.

ಮಠದ ಪ್ರಾಂಗಣದಲ್ಲಿ ವೈವಿಧ್ಯಮಯ ಪುಷ್ಪಾಲಂಕಾರದಿಂದ ಸಿದ್ಧಪಡಿಸಿದ್ದ ವೇದಿಕೆಯಲ್ಲಿ 22 ಆಚಾರ್ಯರು ಅನುವಾದವನ್ನು ಒಪ್ಪಿಸಿದರು. ದೇಶದ ವಿವಿಧ ಕಡೆಗಳಿಂದ ಬಂದಿದ್ದ ಮಠಾಧೀಶರು ಮತ್ತು ವಿದ್ವಾಂಸರು ಇದಕ್ಕೆ ಸಾಕ್ಷಿಯಾದರು.

ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ, ಬನ್ನಂಜೆ ಶ್ರೀ ರಾಘವೇಂದ್ರ ತೀರ್ಥರು, ಸೋಸಲೆ ವ್ಯಾಸರಾಜ ಮಠದ ಶ್ರೀವಿದ್ಯಾಶ್ರೀಶ ತೀರ್ಥರು, ಉಡುಪಿ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು, ರಾಜಾ ಎಸ್‌. ಗಿರಿಯಾ
ಚಾರ್ಯ, ವಿದ್ಯಾಪೀಠದ ಪ್ರಾಚಾರ್ಯ ವಾದಿರಾಜಾಚಾರ್ಯ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.