ADVERTISEMENT

ಚರಂಡಿಯಲ್ಲಿ ಪತ್ತೆಯಾದ ತುಂಡಾದ ಶವ‌: ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 6:49 IST
Last Updated 2 ಜೂನ್ 2018, 6:49 IST
ಚರಂಡಿಯಲ್ಲಿ ಪತ್ತೆಯಾದ ತುಂಡಾದ ಶವ‌: ಕೊಲೆ ಶಂಕೆ
ಚರಂಡಿಯಲ್ಲಿ ಪತ್ತೆಯಾದ ತುಂಡಾದ ಶವ‌: ಕೊಲೆ ಶಂಕೆ   

ಮಂಗಳೂರು: ಸುರತ್ಕಲ್-ಕೃಷ್ಣಾಪುರ ರಸ್ತೆಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಎರಡು ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.  

ಕೊಪ್ಪಳ ಜಿಲ್ಲೆಯ ಕಬ್ಬರಗಿಯ ಮರಿಯಪ್ಪ ಎಂಬಾತನ ಶವ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರಿಯಪ್ಪನ ಕೊಲೆ ಮಾಡಿ, ದೇಹವನ್ನು ಎರಡು ತುಂಡು ಮಾಡಲಾಗಿದೆ. ಅದನ್ನು ಗೋಣಿ ಚೀಲದಲ್ಲಿ ತುಂಬಿಸಿ ಮಳೆನೀರು ಕಾಲುವೆಗೆ ಹಾಕಲಾಗಿದೆ. ಶನಿವಾರ ಬೆಳಿಗ್ಗೆ ಶವ ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ‌ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.           

ADVERTISEMENT

ಮೇಲ್ನೋಟಕ್ಕೆ ಇದು ಕೊಲೆ ಎಂದು ಕಾಣುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಡಿಸಿಪಿ ಹನುಮಂತ್ರಾಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.