ADVERTISEMENT

ಚಿಂತಕ ಜಿ. ರಾಮಕೃಷ್ಣಗೆ ಬಸವರಾಜು ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ಕೋಲಾರ: ಅಧಿಕಾರಕ್ಕೆ ಅಂತಃಕರಣ ಇಲ್ಲದಿರುವುದೇ ಪ್ರಜಾಪ್ರಭುತ್ವದ ಸದ್ಯದ ಬಿಕ್ಕಟ್ಟು. ಇಂಥ ಸನ್ನಿವೇಶದಲ್ಲಿ ಡಾ.ಜಿ. ರಾಮಕೃಷ್ಣ ಅವರು ಪ್ರತಿಪಾದಿಸುವ ನೈತಿಕ ನಿಷ್ಠೆ ಮತ್ತು ತತ್ವಬದ್ಧತೆ ಹೋರಾಟದ ವಲಯ­ವೊಂದನ್ನು ರೂಪಿಸಿದೆ ಎಂದು ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ಡಾ.ಎಲ್. ಬಸವರಾಜು ಪ್ರತಿಷ್ಠಾನವು ಏರ್ಪ­ಡಿಸಿದ್ದ ಕಾರ್ಯ­ಕ್ರಮದಲ್ಲಿ ಡಾ.ಜಿ.­ ರಾಮಕೃಷ್ಣ ಅವರಿಗೆ ಎಲ್.­ಬಸವರಾಜು ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಅಭಿನಂದನೆಯ ನುಡಿ­ಗಳನ್ನಾಡಿದ ಅವರು, ಪ್ರಗತಿ­ಪರರು ಯಾರು? ಪ್ರತಿಗಾಮಿಗಳು ಯಾರು ಎಂಬುದನ್ನು ಗುರುತಿಸಲು ಸಾಧ್ಯ­ವಾಗದ ಸನ್ನಿವೇಶ ಇಂದಿನದು. ಯಾರು ಎಲ್ಲಿದ್ದಾರೆ, ಯಾರೊಂದಿ­ಗಿದ್ದಾರೆ ಎಂದು ಯಾರಿಗೂ ಗೊತ್ತಾಗದ ಸನ್ನಿವೇಶದಲ್ಲಿ ಪ್ರಗತಿ­ಪರತೆಯ ಫೋಸನ್ನು ಕೊಡದ ಅಪ­ರೂಪದ ಜೀವಿಯಾಗಿ ರಾಮಕೃಷ್ಣ ಗಮನ ಸೆಳೆಯುತ್ತಾರೆ ಎಂದರು.

ಪ್ರಶಸ್ತಿಯನ್ನು ಲೇಖಕ ಎಂ.ಎಸ್‌. ಪ್ರಭಾ­ಕರ್‌ (ಕಾಮರೂಪಿ) ಪ್ರದಾನ ಮಾಡಿ­ದರು. ಪ್ರತಿಷ್ಠಾನದ ಹೇಮಾ­ರೆಡ್ಡಿ, ಡಾ.ರಾಮಲಿಂಗಪ್ಪ ಟಿ.ಬೇಗೂರು, ವಿಶಾ­ಲಾಕ್ಷಿ ಬಸವ­ರಾಜು, ಲಕ್ಷ್ಮೀಪತಿ ಕೋಲಾರ, ಪ್ರೊ.ಎನ್‌.ಬಿ. ಚಂದ್ರಮೋಹನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.