ಗೋಣಿಕೊಪ್ಪಲು: ಇಲ್ಲಿನ ಮತ್ತಿಗೋಡು ಸಾಕಾನೆ ಶಿಬಿರದಿಂದ ಕಾಲಭೈರವೇಶ್ವರ (24) ಹೆಸರಿನ ಆನೆಯನ್ನು ಜಾರ್ಖಂಡ್ಗೆ ಕಳುಹಿಸಲಾಯಿತು.
ಜಾರ್ಖಾಂಡ್ನ ಪಾಲಮೌ ಟೈಗರ್ ರಿಸರ್ವ್ ಮೆದಿನಿ ನಗರದ ಸಾಕಾನೆ ಶಿಬಿರಕ್ಕೆ ಅಲ್ಲಿನ ಸರ್ಕಾರದ ಮನವಿ ಆಧರಿಸಿ ಕಳುಹಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಹೇಳಿದರು.
2013ರಲ್ಲಿ ಹಾಸನ ಜಿಲ್ಲೆ ಆಲೂರು ಅರಣ್ಯ ವ್ಯಾಪ್ತಿಯಲ್ಲಿ ಈ ಆನೆಯನ್ನು ಸೆರೆ ಹಿಡಿದು ಮತ್ತಿಗೋಡು ಶಿಬಿರಕ್ಕೆ ತಂದು ಕ್ರಾಲ್ನಲ್ಲಿ ಹಾಕಿ ಪಳಗಿಸಲಾಗಿತ್ತು. ಜಾರ್ಖಂಡ್ನ ಶಿಬಿರದಲ್ಲಿ ಇತರೆ ಆನೆಗಳನ್ನು ಪಳಗಿಸಲು ಈ ಅನೆಯ ಸೇವೆಯನ್ನು ಪಡೆಯಲಾಗುತ್ತದೆ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.