ಸಿಂಧನೂರು: ತಾಲ್ಲೂಕಿನ ಪೋತ್ನಾಳ ಹಳ್ಳದ ಬಳಿ ಇರುವ ಡಾಬಾ ಹತ್ತಿರ ರಾಯಚೂರು -ಗಂಗಾವತಿ ಮುಖ್ಯರಸ್ತೆಯಲ್ಲಿ ಬುಧವಾರ ಸಂಜೆ ಬೊಲೆರೊ ಜೀಪ್ ಹಾಗೂ ಶಾಲಾ ಬಸ್ ನಡುವೆ ನಡೆದ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲಿ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.
ಜೀಪ್ ಚಾಲಕ ಗಂಗನಗೌಡ (35), ಸಿರಾಜ್ (45), ಬಾಷಾಸಾಬ ದೊಡ್ಡಮನಿ (60) ಮೃತಪಟ್ಟವರು. ರಸೂಲ್ ಸಾಬ, ಬಸವರಾಜ ಸಾಳೇರ್, ಬಾಬುಸಾಬ, ಬಸವರಾಜ ಬಡಿಗೇರ ಗಾಯಗೊಂಡಿದ್ದಾರೆ. ಇವರೆಲ್ಲರೂ ದೇವದುರ್ಗ ತಾಲ್ಲೂಕಿನ ರಾಮದುರ್ಗದವರು. ಶಾಲಾ ಬಸ್ನಲ್ಲಿದ್ದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಂಗನಗೌಡರ ಎತ್ತುಗಳನ್ನು ಸಿಂಧನೂರು ತಾಲ್ಲೂಕಿನ ಗೊರೇಬಾಳ ಕ್ಯಾಂಪಿಗೆ ಗಣಪತಿ ಮೆರವಣಿಗೆಗೆಂದು ಕರೆತರಲಾಗಿತ್ತು. ತಮ್ಮ ಎತ್ತುಗಳನ್ನು ನೋಡುವ ಉದ್ದೇಶದಿಂದ ಗಂಗನಗೌಡ ಗ್ರಾಮದ ಆರು ಜನರನ್ನು ತನ್ನೊಂದಿಗೆ ಕರೆದುಕೊಂಡು ಗೊರೇಬಾಳ ಕ್ಯಾಂಪಿಗೆ ಬಂದ್ದಿದ್ದರು. ಮೆರವಣಿಗೆ ಮುಗಿಸಿಕೊಂಡು ವಾಪಸ್ ತೆರಳುವ ಸಮಯದಲ್ಲಿ ಅಪಘಾತ ನಡೆದಿದೆ ಎಂದು ಬಳಗಾನೂರು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.