ADVERTISEMENT

ಜೆಡಿಎಸ್‌, ಕಾಂಗ್ರೆಸ್‌ ನಾಯಕರ ಮನೆಗಳಲ್ಲಿ ಐ.ಟಿ ಶೋಧ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 19:40 IST
Last Updated 28 ಏಪ್ರಿಲ್ 2018, 19:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರ ಮನೆಗಳ ಮೇಲೆ ಐ.ಟಿ ದಾಳಿ ಮುಂದುವರಿದಿದ್ದು, ಖಾನಾಪುರ ಜೆಡಿಎಸ್‌ ಅಭ್ಯರ್ಥಿ ನಾಸಿರ್‌ ಬಾಗವಾನ್‌ ಹಾಗೂ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಆರ್‌. ಉಮೇಶ್‌ ಅವರ ಚಾಮರಾಜ ನಗರದ ಮನೆಗಳನ್ನು ಶೋಧಿಸಲಾಗಿದೆ.

ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದ ಮನೆ, ಹುಬ್ಬಳ್ಳಿ ವಿದ್ಯಾನಗರದ ಮನೆ, ಅರವಿಂದ ನಗರದ ಕಚೇರಿ ಮೇಲೆ ಏಕಕಾಲಕ್ಕೆ ಐ.ಟಿ ದಾಳಿ ನಡೆದಿದೆ. ಮೂರು ವಾಹನಗಳಲ್ಲಿ ಬಂದಿದ್ದ ಅಧಿಕಾರಿಗಳು ದಾಖಲೆ ಪತ್ರಗಳನ್ನು ಶೋಧಿಸಿದ್ದಾರೆ.

ನಾಸಿರ್‌ ತಮ್ಮ ನಾಮಪತ್ರದಲ್ಲಿ ₹191ಕೋಟಿ ಆಸ್ತಿ ಘೋಷಿಸಿದ್ದರು. ನಾಮಪತ್ರ ಸಲ್ಲಿಕೆಯಾದ ಬೆನ್ನಲ್ಲೇ ದಾಳಿ ನಡೆದಿದೆ.

ADVERTISEMENT

ಇದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಪ್ತರೆನ್ನಲಾದ ಉಮೇಶ್‌ ಅವರ ಚಾಮರಾಜನಗರದ ಮನೆಯನ್ನೂ ಶೋಧಿಸಲಾಗಿದೆ. ಆಸ್ತಿ ಹಾಗೂ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.