ಚಿತ್ರದುರ್ಗ: 'ಟಿಪ್ಪು ಜಯಂತಿಯ ವಿವಾದ ಎಬ್ಬಿಸಿ ಕಾಲಹರಣ ಮಾಡುವ ಬದಲು ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ನೆರವಾಗಬೇಕು' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಆಗ್ರಹಿಸಿದರು.
ತಾಲ್ಲೂಕಿನ ಭರಮಸಾಗರದಲ್ಲಿ ಕೀಟ ಬಾಧೆಯಿಂದ ನಾಶವಾಗಿರುವ ಜಮೀನುಗಳಿಗೆ ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮಂಗಳೂರಿಗೆ ಹೋಗಿ ಪರಿ ವರ್ತನಾ ರ್ಯಾಲಿ ಮಾಡಿ ಏನು ಸಾಧಿ ಸುತ್ತಾರೆ’ ಎಂದು ಬಿಜೆಪಿಯವರನ್ನು ಪ್ರಶ್ನಿಸಿದ ಗೌಡರು, 'ರೈತರ ಬಗ್ಗೆ ಕಾಳಜಿ ಇದ್ದರೆ ಪ್ರಧಾನಿ ಮೋದಿ ಜಮೀನುಗಳಿಗೆ ಬಂದು ನೋಡಲಿ' ಎಂದು ಸವಾಲು ಹಾಕಿದರು. ಸಿ.ಎಂ ಧರ್ಮಸ್ಥಳ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡ, 'ಸಿದ್ದ ರಾಮಯ್ಯ ಅವರಿಗೆ ಈಗಲಾದರೂ ದೇವರನ್ನು ನೋಡಬೇಕು ಅನ್ನೋ ಬುದ್ಧಿ ಬಂದಿದೆಯಲ್ಲ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.