ಬೆಳಗಾವಿ: ‘ಗರ್ಭಪಾತ ನಿಷೇಧ ಕಾನೂನನ್ನು ಹಿಂದಕ್ಕೆ ಪಡೆಯಲು ಐರ್ಲೆಂಡ್ ಜನರು ಜನಮತದ ಮೂಲಕ ಬೆಂಬಲ ಸೂಚಿಸಿರುವುದು ಸಂತಸ ತಂದಿದೆ. ಇದಕ್ಕೆ ನಾನು ಆ ದೇಶದ ಜನರಿಗೆ ಚಿರಋಣಿಯಾಗಿದ್ದೇನೆ’ ಎಂದು ಇಲ್ಲಿನ ನಿವೃತ್ತ ಎಂಜಿನಿಯರ್ ಅಂದಾನೆಪ್ಪ ಯಾಳಗಿ ಹೇಳುತ್ತಾರೆ.
‘ನನ್ನ ಮಗಳಿಗೆ ಆದ ಗತಿ ಇನ್ನೊಬ್ಬರಿಗೆ ಆಗಬಾರದೆಂದು ಆರು ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ತಿದ್ದುಪಡಿ ಕಾನೂನಿಗೆ ಸವಿತಾ ಹಾಲಪ್ಪನವರ ಹೆಸರು ಇಡುವಂತೆ ಆ ದೇಶದ ಸಂಸದರನ್ನು ಕೋರುತ್ತೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಸವಿತಾ ಸಾವಿನ ನಂತರ ಅಲ್ಲಿನ ಹಲವು ಪತ್ರಕರ್ತರು, ಸಾರ್ವಜನಿಕರು ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಅವರಿಗೆ ಎಲ್ಲ ರೀತಿಯ ಮಾಹಿತಿ ನೀಡಿದೆವು. ಹೋರಾಟಕ್ಕೆ ಬಲ ತುಂಬಿದೆವು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.