ರಾಯಚೂರು: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಒತ್ತಾಯಿಸಿ ರೈಲು ತಡೆ ಪ್ರತಿಭಟನೆಯನ್ನು ತೆಲಂಗಾಣ ಹೋರಾಟ ಸಮಿತಿಯು ಅ. 15ರಿಂದ ಆರಂಭಿಸಲಿದೆ. ಇದರಿಂದ ರಾಯಚೂರು ರೈಲು ನಿಲ್ದಾಣ ಮಾರ್ಗವಾಗಿ ಸಂಚರಿಸುವ ಕೆಲ ರೈಲುಗಳ ಸಂಚಾರ ಬಂದ್ ಆಗಲಿದೆ.
ಈ ಪ್ರತಿಭಟನೆಯಿಂದ ಆರ್ಟಿಪಿಎಸ್ಗೆ ಕಲ್ಲಿದ್ದಲು ಪೂರೈಕೆಗೆ ಅಡ್ಡಿಯಾಗುವ ಸಾಧ್ಯತೆಗಳಿವೆ. ಪ್ರಯಾಣಿಕರ ರೈಲುಗಳನ್ನು ಮಾತ್ರ ತಡೆದು ಗೂಡ್ಸ್ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರೆ ಮಾತ್ರ ಕಲ್ಲಿದ್ದಲು ಸರಬರಾಜು ಆಗಲಿದೆ. ಒಂದೇ ರೈಲು ಮಾರ್ಗವಿದ್ದು ಪ್ರತಿಭಟನೆ ಕಾರಣದಿಂದ ಅದು ಬಂದ್ ಆದರೆ ಕಲ್ಲಿದ್ದಲು ತರುವುದು ಕಷ್ಟ ಎಂದು ಆರ್ಟಿಪಿಎಸ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.