ADVERTISEMENT

ದುಬಾರೆಯಲ್ಲಿ ಅಸ್ವಸ್ಥಗೊಂಡಿದ್ದ ಕಾಡಾನೆ ಸಾವು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2018, 14:55 IST
Last Updated 27 ಏಪ್ರಿಲ್ 2018, 14:55 IST
ಸಿದ್ದಾಪುರ ಸಮೀಪದ ಅವರೆಗುಂದ ಅರಣ್ಯ ವ್ಯಾಪ್ತಿಯಲ್ಲಿ ಶುಕ್ರವಾರ ಸಾವನ್ನಪ್ಪಿದ ಕಾಡಾನೆ
ಸಿದ್ದಾಪುರ ಸಮೀಪದ ಅವರೆಗುಂದ ಅರಣ್ಯ ವ್ಯಾಪ್ತಿಯಲ್ಲಿ ಶುಕ್ರವಾರ ಸಾವನ್ನಪ್ಪಿದ ಕಾಡಾನೆ   

ಸಿದ್ದಾಪುರ (ಮಡಿಕೇರಿ): ಸಮೀಪದ ಅವರೆಗುಂದ ಅರಣ್ಯ ವ್ಯಾಪ್ತಿಯ ದುಬಾರೆಯಲ್ಲಿ ಕೆಲವು ದಿನಗಳಿಂದ ಅಸ್ವಸ್ಥಗೊಂಡು ನರಳುತಿದ್ದ ಸುಮಾರು 55 ವರ್ಷದ ಹೆಣ್ಣು ಕಾಡಾನೆ ಶುಕ್ರವಾರ ಮೃತಪಟ್ಟಿದೆ.

ಈ ಬಗ್ಗೆ ಮಾತನಾಡಿರುವ ವೈದ್ಯಾಧಿಕಾರಿ ಮುಜೀಬ್‌ ಅವರು, ‘ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಪರಿಶೀಲಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ದೇಹದ ಬಹುತೇಕ ಭಾಗದಲ್ಲಿ ಗುಂಡೇಟಿನ ರಂಧ್ರಗಳು ಇದ್ದವು. ಚಿಕಿತ್ಸೆಗೆ ಒಳಪಡಿಸಲಾರದಷ್ಟು ರಕ್ತಸ್ರಾವ ಸಂಭವಿಸಿತ್ತು’ ಎಂದು ತಿಳಿಸಿದ್ದಾರೆ.

ಕಾಡಾನೆಗಳ ಚಲನವಲನ ವೀಕ್ಷಿಸಲು ಅರಣ್ಯ ಇಲಾಖೆ ಈಚೆಗೆ ಕೆಲವು ಹೆಣ್ಣು ಕಾಡಾನೆಗಳಿಗೆ ರೇಡಿಯೊ ಕಾಲರ್‌ ಅಳವಡಿಸಿತ್ತು. ಮೃತಪಟ್ಟಿರುವ ಹೆಣ್ಣಾನೆಗೆ ರೇಡಿಯೊ ಕಾಲರ್‌ ಅಳವಡಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.