ADVERTISEMENT

ಧಾರವಾಡ: ಬಿಜೆಪಿ ಕಚೇರಿ ಮುಂದೆ ವಾಮಾಚಾರ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 15:27 IST
Last Updated 28 ಮಾರ್ಚ್ 2018, 15:27 IST
ಧಾರವಾಡ: ಬಿಜೆಪಿ ಕಚೇರಿ ಮುಂದೆ ವಾಮಾಚಾರ
ಧಾರವಾಡ: ಬಿಜೆಪಿ ಕಚೇರಿ ಮುಂದೆ ವಾಮಾಚಾರ   

ಧಾರವಾಡ: ಇಲ್ಲಿನ ಸುಭಾಸ ರಸ್ತೆಯಲ್ಲಿರುವ ಬಿಜೆಪಿ ಕಚೇರಿ ಮುಂದೆ ಗೊಂಬೆಯೊಂದನ್ನು ಕಿಡಿಗೇಡಿಗಳು ನೇತು ಹಾಕಿದ್ದು, ಪಕ್ಷದ ಕಾರ್ಯಕರ್ತರು ವಾಮಾಚಾರದ ಶಂಕೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನದ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಈ ಕುರಿತು ಮಾತನಾಡಿದ ಬಿಜೆಪಿ ಮುಖಂಡ ಶರಣು ಅಂಗಡಿ, ‘ಬೆಳಿಗ್ಗೆ ಕಚೇರಿಗೆ ಬಂದಾಗ ಪುಟ್ಟದಾದ ಕಪ್ಪು ಗೊಂಬೆಯೊಂದನ್ನು ಕಚೇರಿ ಮುಂದೆ ತೂಗು ಹಾಕಲಾಗಿತ್ತು. ಇದು ಸಹಜವಾಗಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ. ಈ ಕುರಿತು ಚುನಾವಣಾ ಆಯೋಗ ಹಾಗೂ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.