ADVERTISEMENT

ಬುರ್ರಾಕಥಾ ಕಲಾವಿದೆ ಮಾರೆಮ್ಮ ಬಸಣ್ಣ ಶಿರವಾಟಿ ನಿಧನ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 5:13 IST
Last Updated 21 ಮಾರ್ಚ್ 2018, 5:13 IST
ಬುರ್ರಾಕಥಾ ಕಲಾವಿದೆ ಮಾರೆಮ್ಮ ಬಸಣ್ಣ ಶಿರವಾಟಿ
ಬುರ್ರಾಕಥಾ ಕಲಾವಿದೆ ಮಾರೆಮ್ಮ ಬಸಣ್ಣ ಶಿರವಾಟಿ   

ಯಾದಗಿರಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬುರ್ರಾಕಥಾ ಕಲಾವಿದೆ ಮಾರೆಮ್ಮ ಬಸಣ್ಣ ಶಿರವಾಟಿ ಮಂಗಳವಾರ ರಾತ್ರಿ ಯಾದಗಿರಿ ತಾಲ್ಲೂಕಿನ ಸೈದಾಪುರದಲ್ಲಿ ನಿಧನರಾದರು.

ಅಭಿಜಾತ ಕಲಾವಿದೆಯಾಗಿದ್ದ ಮಾರೆಮ್ಮ ಬುರ್ರಾ ಕಥಾ ಕಲೆಯನ್ನು ನಾಡಿನಾದ್ಯಂತ ಪಸರಿಸಿದ್ದರು. ಇವರ ಕಲೆಯನ್ನು ಗುರುತಿಸಿದ ರಾಜ್ಯ ಸರ್ಕಾರ 2015ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ಬುಧವಾರ ಸಂಜೆ ಸೈದಾಪುರದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.