ಬೆಂಗಳೂರು:ಭಾಗ್ಯಲಕ್ಷ್ಮಿ ಯೋಜನೆಯಡಿ 18 ವರ್ಷಗಳ ಕಾಲ ಫಲಾನುಭವಿ ಹೆಣ್ಣುಮಕ್ಕಳಿಗೆ ಸೀರೆ ವಿತರಿಸುತ್ತಿದ್ದು ಇವುಗಳನ್ನು ಇರಿಸಲು ಅಲ್ಮೇರಾವನ್ನು ಒದಗಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
‘ಒಂದು ಅಲ್ಮೆರಾಕ್ಕೆ 300ರಿಂದ 400 ರೂಪಾಯಿಗಳಾಗಬಹುದಾಗಿದ್ದು ಸೀರೆಗಳನ್ನು ಜತನದಿಂದ ಕಾಪಾಡುವ ಉದ್ದೇಶದಿಂದ ಅಲ್ಮೇರಾಗಳನ್ನು ಒದಗಿಸುವುದು ತಪ್ಪಲ್ಲ ಅಲ್ಲವೇ?’ ಎಂದು ಪ್ರಶ್ನಿಸಿದರು.ಭಾನುವಾರ ನಗರದ ಟಿಂಬರ್ ಯಾರ್ಡ್ ಬಡಾವಣೆಯ ಎಂಸಿಟಿ ಕೊಳೆಗೇರಿ ಪ್ರದೇಶದಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸುತ್ತಿರುವ ನೂತನ ವಸತಿ ಸಂಕೀರ್ಣದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.