ADVERTISEMENT

ಮಂತ್ರಾಲಯ: ನಾಳೆಯಿಂದ ಗುರುಭಕ್ತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ರಾಯಚೂರು: ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಾ. 3ರಿಂದ 8ರವರೆಗೆ ರಾಘವೇಂದ್ರ ಗುರುಭಕ್ತಿ ಉತ್ಸವ ನಡೆಯಲಿದೆ. 
ರಾಘವೇಂದ್ರ ಸ್ವಾಮಿ 393ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 419ನೇ ವರ್ಧಂತಿ ಉತ್ಸವ ಅಂಗವಾಗಿ ಈ ಗುರುಭಕ್ತಿ ಉತ್ಸವ­ವನ್ನು ಮಂತ್ರಾಲಯ  ರಾಘವೇಂದ್ರ­ಸ್ವಾಮಿ ಮಠ ಆಯೋ­ಜಿಸಿದೆ. ಮಠದ ಪೀಠಾಧಿಪತಿಗಳಾದ ಸುಯತೀಂದ್ರತೀರ್ಥ ಸ್ವಾಮೀಜಿ, ಉತ್ತರಾಧಿಕಾರಿ ಸುಬುಧೇಂದ್ರತೀರ್ಥ ಸ್ವಾಮೀಜಿ ಅವರ ಸಾನ್ನಿಧ್ಯ ವಹಿಸುವರು.

ಮಾ. 3ರಂದು ಪಟ್ಟಾಭಿಷೇಕ ನಡೆಯಲಿದ್ದು, ಬೆಳಿಗ್ಗೆ 9ಕ್ಕೆ ಪಟ್ಟಾಭಿಷೇಕ ಉತ್ಸವ ನಡೆಯಲಿದೆ. 8ರಂದು ವರ್ಧಂತಿ ಉತ್ಸವ ನಡೆಯಲಿದೆ. ಮಾ. 3ರಿಂದ 8ರವರೆಗೆ ಪ್ರತಿದಿನ ಬೆಳಿಗ್ಗೆ ಜ್ಞಾನ ಯಜ್ಞ, ಸಂಜೆ ಭಜನೆ ಸಂಧ್ಯಾ, ಜ್ಞಾನ ಯಜ್ಞ, ಸಂಗೀತ ಸಂಧ್ಯಾ, ಹರಿದಾಸವಾಣಿ, ದಾಸವಾಣಿ, ನೃತ್ಯ, ಹಾಸ್ಯ ದೀಪಿಕಾ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.