ಕಲಬುರ್ಗಿ: ‘ಇಲ್ಲಿನ ಸುಲಫಲ ಮಠದಲ್ಲಿ ಭಕ್ತರೊಬ್ಬರ ಸಮಾಧಿ ನಿರ್ಮಿಸಲಾಗುವುದು. ಮಠಕ್ಕೆ ಬರುವ ಭಕ್ತರು ಶ್ರೇಷ್ಠ ಎಂಬ ಸಂದೇಶವನ್ನು ಈ ಮೂಲಕ ಸಾರಲಾಗುವುದು’ ಎಂದು ಶ್ರೀಶೈಲದ ಸಾರಂಗಧರ ಮತ್ತು ಕಲಬುರ್ಗಿಯ ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
‘ಸ್ವಾಮೀಜಿ ಅವರಿಗೆ ಇರುವುಷ್ಟೇ ಗೌರವ ಮಠಕ್ಕೆ ಬರುವ ಭಕ್ತರಿಗೂ ಇದೆ. ಆದರೆ, ಮಠಗಳಲ್ಲಿ ಸ್ವಾಮೀಜಿಗಳ ಸಮಾಧಿ ಮಾತ್ರ ನಿರ್ಮಿಸಿ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ನಮ್ಮ ಮಠದಲ್ಲಿ ಭಕ್ತರೊಬ್ಬರ ಸಮಾಧಿ ನಿರ್ಮಿಸಿ ಹೊಸ ಪರಂಪರೆಗೆ ನಾಂದಿ ಹಾಡಲಿದ್ದೇವೆ’ ಎಂದು ಇಲ್ಲಿನ ಸಿದ್ಧಾರ್ಥ ನಗರದ ಸ್ಮಶಾನದಲ್ಲಿ ಬುಧವಾರ ನಡೆದ ‘ಮೌಢ್ಯ ಮೀರಿದ ನಡೆ ನಮ್ಮದಾಗಲಿ’ ಕಾರ್ಯಕ್ರಮದಲ್ಲಿ ತಿಳಿಸಿದರು.
‘ಸ್ಮಶಾನಕ್ಕೆ ಹೋಗಿ ಬಂದವರನ್ನು ಮನೆ ಹೊರಗೆ ನಿಲ್ಲಿಸುವ ಕಂದಾಚಾರ ನಮ್ಮಲ್ಲಿದೆ. ಅವರನ್ನು ಮುಟ್ಟುವುದು ಅಪವಿತ್ರ ಎಂಬ ಮನೋಭಾವ ನಿವಾರಣೆಯಾಗಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.