
ಪ್ರಜಾವಾಣಿ ವಾರ್ತೆಮೂಡುಬಿದಿರೆ: ಕಾಂತಾವರ ಕನ್ನಡ ಸಂಘವು 2015ರ ಸಾಲಿನ ಕಾವ್ಯ ಪ್ರಶಸ್ತಿಗಾಗಿ ಮುದ್ರಣಕ್ಕೆ ಸಿದ್ಧವಾಗಿರುವ ಕವನ ಸಂಗ್ರಹದ ಹಸ್ತಪ್ರತಿಗಳನ್ನು ಆಹ್ವಾನಿಸಿದೆ.
ಪ್ರಶಸ್ತಿಯು ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿ ರುತ್ತದೆ. ಸ್ಪರ್ಧೆಯ ವಿವರಗಳನ್ನು ಪಡೆ ಯಲು ₨5ರ ಅಂಚೆ ಚೀಟಿ ಹಚ್ಚಿದ ಸ್ವವಿಳಾಸ ಇರುವ ಕವರನ್ನು ಅಧ್ಯಕ್ಷರು, ಕಾಂತಾವರ ಕನ್ನಡ ಸಂಘ, ಅಂಚೆ ಕಾಂತಾವರ-–574129, ಉಡುಪಿ ಜಿಲ್ಲೆ ಇವರಿಗೆ ಕಳುಹಿಸಬಹುದು.
ವಿವರ ಗಳನ್ನು ಪಡೆಯುವ ಕೊನೆಯ ದಿನಾಂಕ ಜುಲೈ 30. ಹಸ್ತಪ್ರತಿ ಸ್ವೀಕಾರದ ಕಡೇ ದಿನಾಂಕ ಆಗಸ್್ಟ 30. ಮಾಹಿತಿಗೆ ಸದಾನಂದ ನಾರಾವಿ (90089 78366) ಸಂಪರ್ಕಿಸಲು ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.