ADVERTISEMENT

ಮೊದಲ ದಿನ ಆರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 19:59 IST
Last Updated 19 ಮಾರ್ಚ್ 2019, 19:59 IST
   

ಬೆಂಗಳೂರು: ಮೊದಲ ಹಂತದಲ್ಲಿ ಮತದಾನ ನಡೆಯುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮಂಗಳವಾರದಿಂದ ಆರಂಭವಾಗಿದ್ದು, ಮೊದಲ ದಿನ ಆರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ದಕ್ಷಿಣ ಕನ್ನಡದಿಂದ ಸುಪ್ರೀತ್ ಕುಮಾರ್‌ ಪೂಜಾರಿ (ಲೋಕತಾಂತ್ರಿಕ ಜನತಾದಳ), ಮಂಡ್ಯದಿಂದ ಕೌಡ್ಲೆ ಚೆನ್ನಪ್ಪ (ಎಸ್‌ಯುಸಿಐ, ಜೆಡಿಯು, ಸಮಾಜವಾದಿ ಪಕ್ಷ), ಮೈಸೂರಿನಿಂದ ಆಯೂಬ್‌ ಖಾನ್‌ (ಐಎನ್‌ಸಿಪಿ), ಸಂಧ್ಯಾ ‍ಪಿ.ಎಸ್‌. (ಎಸ್‌ಯುಸಿಐ), ಆನಂದ್‌ ಜೆ.ಜೆ. (ಕಾಂಗ್ರೆಸ್‌ (ಐ), ಸ್ವತಂತ್ರ), ಬೆಂಗಳೂರು ದಕ್ಷಿಣದಲ್ಲಿ ಅಂಬ್ರೋಸ್‌ ಡಿಮೆಲ್ಲೊ( ಸ್ವತಂತ್ರ) ನಾಮಪತ್ರ ಸಲ್ಲಿಸಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT