ಮೂಡಿಗೆರೆ: ಮಾಜಿ ಸಚಿವೆ, ವಿಧಾನ ಪರಿಷತ್ತಿನ ಸದಸ್ಯೆ, ಮೂಡಿಗೆರೆ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಅವರಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವುದರ ವಿರುದ್ಧ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೋಟಮ್ಮ ಮೃತಪಟ್ಟರು ಎಂಬ ವದಂತಿಯನ್ನು ಹರಿಯಬಿಡಲಾಗಿದೆ. ವೀರೇಂದ್ರ ಭಗತ್ ಸಿಂಗ್ ಎಂಬುವವರು ಫೇಸ್ಬುಕ್ ಖಾತೆಯಲ್ಲಿ ಈ ಪೋಸ್ಟ್ ಹಾಕಿದ್ದು, ಅವರ ಮೇಲೆ ದೂರು ದಾಖಲಾಗಿದೆ.
ಮೂಡಿಗೆರೆ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ ದೂರು ನೀಡಿದ್ದಾರೆ.
(ಸದ್ಯ ಫೇಸ್ಬುಕ್ನಲ್ಲಿ ಈ ಖಾತೆ ದೊರೆಯುತ್ತಿಲ್ಲ..)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.