ADVERTISEMENT

‘ಲಂಚ ಪ್ರಕರಣ: ಸರ್ಕಾರ ವರದಿ ಅಂಗೀಕರಿಸಲಿ’

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST

ದಾವಣಗೆರೆ: ಕಾರಾಗೃಹಗಳ ಡಿಜಿಪಿಯಾಗಿದ್ದ ಎಚ್.ಎನ್.ಸತ್ಯನಾರಾಯಣರಾವ್‌ ಲಂಚ ಪಡೆದ ಆರೋಪ ಸಂಬಂಧ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ಕುಮಾರ್ ನೇತೃತ್ವದ ಸಮಿತಿ ವರದಿ ಸಲ್ಲಿಸಿದರೆ ಸರ್ಕಾರ ಅಂಗೀಕರಿಸಬೇಕು ಎಂದು ಡಿಐಜಿ ಡಿ.ರೂಪಾ ಅಭಿಪ್ರಾಯಪಟ್ಟರು.

ಮಹಿಳಾ ಸಾಹಿತ್ಯ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ‘ವರದಿ ಸಲ್ಲಿಕೆಯಾಗಿದೆಯಾ ಎಂಬ ಮಾಹಿತಿ ಇಲ್ಲ. ಆದರೆ, ವರದಿ ಒಪ್ಪಿ ಕ್ರಮ ತೆಗೆದುಕೊಂಡರೆ ರಾಜ್ಯದ ಕಾರಾಗೃಹಗಳು ಸುಧಾರಣೆಯಾಗಲಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT