ADVERTISEMENT

ವಿಜಯಪುರದಲ್ಲಿ ಗುಂಡಿನ ಚಕಮಕಿ: ಪಿಎಸ್‌ಐಗೆ ಗಾಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 16:15 IST
Last Updated 30 ಅಕ್ಟೋಬರ್ 2017, 16:15 IST
ವಿಜಯಪುರದಲ್ಲಿ ಗುಂಡಿನ ಚಕಮಕಿ: ಪಿಎಸ್‌ಐಗೆ ಗಾಯ
ವಿಜಯಪುರದಲ್ಲಿ ಗುಂಡಿನ ಚಕಮಕಿ: ಪಿಎಸ್‌ಐಗೆ ಗಾಯ   

ವಿಜಯಪುರ: ಅಕ್ರಮ ಶಸ್ತ್ರಾಸ್ತ್ರ ಪತ್ತೆಗೆ ತೆರಳಿದ್ದ ಪೊಲೀಸರ ತಂಡದ ಮೇಲೆ ರೌಡಿ ಶೀಟರ್‌ಗಳು ಸೋಮವಾರ ನಸುಕಿನಲ್ಲಿ ಗುಂಡಿನ ದಾಳಿ ನಡೆಸಿದ್ದು, ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ಬಲಗೈಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ.

ರಾಜ್ಯದ ಗಡಿ ಗ್ರಾಮ ಕೊಂಕಣಗಾಂವ್‌ನಲ್ಲಿನ ರೌಡಿಶೀಟರ್ ಧರ್ಮರಾಜ ಚಡಚಣ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ. ಪೊಲೀಸರು ಪ್ರತಿ ದಾಳಿ ನಡೆಸಿದ್ದು, ಧರ್ಮರಾಜ ಚಡಚಣ ಸೇರಿದಂತೆ ಇಬ್ಬರು ಸಹಚರರಿಗೆ ಗುಂಡು ತಗುಲಿದೆ. 

ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಧರ್ಮರಾಜ ಚಡಚಣ ನಗರದ ಬಿಎಲ್‌ಇಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ಎಸ್‌ಪಿ ಕುಲದೀಪ್ ಕುಮಾರ್ ತಿಳಿಸಿದ್ದಾರೆ.

ADVERTISEMENT

ಕಣಗಾಂವ್ ಗ್ರಾಮದಲ್ಲಿ ಬಿಗಿ ಪೊಲೀಸ್ ಪಹರೆ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.