ADVERTISEMENT

ಶಂಕಿತ ನಕ್ಸಲ್‌ ತಂಡ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 20:04 IST
Last Updated 15 ಜೂನ್ 2018, 20:04 IST

ಸುಳ್ಯ: ತಾಲ್ಲೂಕಿನ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಎಂಬಲ್ಲಿ ಗುರುವಾರ ರಾತ್ರಿ ಮೂವರು ಶಂಕಿತ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ.

ಸುಳ್ಯದ ಬಿಜೆಪಿ ನಾಯಕ ಜಯರಾಮ ಹಾಡಿಕಲ್ಲು ಅವರಿಗೆ ಸೇರಿದ ರಬ್ಬರ್ ತೋಟದ ಶೆಡ್ಡಿಗೆ ಬಂದ ಇಬ್ಬರು ಯುವತಿಯರು ಮತ್ತು ಒಬ್ಬ ಪುರುಷ, ಅಲ್ಲಿದ್ದ ಥಾಮಸ್‌ ಅವರಿಂದ ಅನ್ನ, ಮೊಟ್ಟೆ ಪಡೆದು, ಊಟ ಮಾಡಿ ಅಲ್ಲಿಂದ ತೆರಳಿದ್ದಾರೆ. ಅವರ ಕೈಯಲ್ಲಿ ಬಂದೂಕು ಇತ್ತು. ಜಯರಾಮ ಅವರ ಮನೆ ಸಮೀಪ ಈ ಶೆಡ್‌ ಇದೆ. ಬಂದ ಶಂಕಿತರು ತೆಲುಗಿನಲ್ಲಿ ಪರಸ್ಪರ ಮಾತನಾಡುತ್ತಿದ್ದರು.

ಎಎನ್‌ಎಫ್ ಮತ್ತು ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೋಧಕಾರ್ಯ ನಡೆಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.