ADVERTISEMENT

ಶಾಂತಿ ಕದಡುವ ಷಾ ಭೇಟಿ: ಸಚಿವ ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 19:30 IST
Last Updated 2 ಅಕ್ಟೋಬರ್ 2017, 19:30 IST
ಶಾಂತಿ ಕದಡುವ ಷಾ ಭೇಟಿ: ಸಚಿವ ತಿಮ್ಮಾಪುರ
ಶಾಂತಿ ಕದಡುವ ಷಾ ಭೇಟಿ: ಸಚಿವ ತಿಮ್ಮಾಪುರ   

ಬಾಗಲಕೋಟೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಭೇಟಿಯಿಂದ ರಾಜ್ಯಕ್ಕೆ ಶಾಂತಿಯಂತೂ ಸಿಗುವುದಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸೋಮವಾರ ಇಲ್ಲಿ ಹೇಳಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಮಂಗಳೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಬರುತ್ತಾರೆ; ಮತ್ತೊಬ್ಬರೂ ಬರುತ್ತಾರೆ. ಆದರೆ, ಅವರು ಬಂದರೆ ಉದ್ವಿಗ್ನ ಸ್ಥಿತಿ ನಿರ್ಮಿಸಿ ವಾತಾವರಣ ಹದಗೆಡಿಸುತ್ತಾರೆ’ ಎಂದು ಆರೋಪಿಸಿದರು.

'ಇವರು ಬರುತ್ತಾರೆ ಎಂದರೆ ಸಾವಿರ ಪೊಲೀಸರನ್ನು ನಿಲ್ಲಿಸಬೇಕು. ಧ್ವಜ ಹಿಡಿದುಕೊಂಡು ಅಶಾಂತಿ ಸೃಷ್ಟಿಸುವವರಿಗೆ ಚುನಾವಣೆ ಹತ್ತಿರ ಬಂದಾಗಷ್ಟೇ ರಾಜ್ಯದ ಅಭಿವೃದ್ಧಿ ನೆನಪಾಗುತ್ತದೆ’ ಎಂದು ಟೀಕಿಸಿದರು.

ADVERTISEMENT

ವಿದೇಶಗಳಲ್ಲಿ ಭಾಷಣ ಮಾಡುವ ಬದಲು ದೇಶದ ಅಭಿವೃದ್ಧಿ ಕಡೆಗೆ ಪ್ರಧಾನಿ ಹಚ್ಚಿನ ಗಮನ ಹರಿಸಬೇಕು ಎಂದ ಸಚಿವರು, ‘ಮಂತ್ರದಿಂದ ಮಾವಿನಕಾಯಿ ಉದುರುವುದಿಲ್ಲ; ಕೇವಲ ಭಾಷಣದಿಂದ ದೇಶ ಉದ್ಧಾರ ಆಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.