ADVERTISEMENT

ಶಾಲೆಗಳಲ್ಲಿ ಮಾಂಸಾಹಾರ ಕೊಡಿ: ಲೇಖಕ ಬಿ.ಶ್ರೀಪಾದ್‌ ಭಟ್‌

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST
ಶಾಲೆಗಳಲ್ಲಿ ಮಾಂಸಾಹಾರ ಕೊಡಿ: ಲೇಖಕ ಬಿ.ಶ್ರೀಪಾದ್‌ ಭಟ್‌
ಶಾಲೆಗಳಲ್ಲಿ ಮಾಂಸಾಹಾರ ಕೊಡಿ: ಲೇಖಕ ಬಿ.ಶ್ರೀಪಾದ್‌ ಭಟ್‌   

ತುಮಕೂರು: ‘ಶೋಷಿತ ವರ್ಗದವರಿಗೆ ಹೆಚ್ಚಿನ ಪೌಷ್ಟಿಕಾಂಶ ಇರುವ ಆಹಾರದ ಅವಶ್ಯಕತೆ ಇದೆ. ಇಂತಹ ಸಮುದಾಯದವರು ಕಲಿಯುವ ಸರ್ಕಾರಿ ಶಾಲೆಗಳಲ್ಲಿ ಮಾಂಸಾಹಾರ ಊಟ ನೀಡಬೇಕು’ ಎಂದು ಲೇಖಕ ಬಿ.ಶ್ರೀಪಾದ್‌ ಭಟ್‌ ಹೇಳಿದರು.

ನಗರದಲ್ಲಿ ಭಾನುವಾರ ತುಮಕೂರು ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಆಯೋಜಿಸಿದ್ದ ಪ್ರಚಲಿತ ವಿದ್ಯಮಾನಗಳ ಕುರಿತ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ವರ್ಗಗಳನ್ನು ಪ್ರತಿನಿಧಿಸುತ್ತಿದ್ದರೂ, ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಲು ಸಾಧ್ಯವಾಗಿಲ್ಲ. ಆಹಾರ ಸಂಸ್ಕೃತಿಯನ್ನು ಕೇವಲ ಸಸ್ಯಹಾರಕ್ಕೆ ಸೀಮಿತ ಮಾಡದೇ ಪೌಷ್ಟಿಕ ಆಹಾರ ನೀಡುವತ್ತ ಸರ್ಕಾರಗಳು ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.