ADVERTISEMENT

ಶಾಸಕ ಸುರೇಶ್‌ಬಾಬು ಸೇರಿ ನಾಲ್ವರಿಗೆ ಜಾಮೀನು ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ಬೆಂಗಳೂರು: ಬೇಲೆಕೇರಿ ಬಂದರಿನ ಮೂಲಕ ಕಬ್ಬಿಣದ ಅದಿರು ಕಳ್ಳ­ಸಾಗಣೆ ಮಾಡಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಂಪ್ಲಿ ಶಾಸಕ ಟಿ.ಎಚ್‌.ಸುರೇಶ್‌ ಬಾಬು, ಐಎಲ್‌ಸಿ ಇಂಡಸ್ಟ್ರೀಸ್‌ ಮಾಲೀಕ ಕೆ.ಸೋಮಶೇಖರ್, ಹೊಸ­ಪೇಟೆಯ ಕೆ.ಗೋವಿಂದರಾಜು ಮತ್ತು ಐ.ಎರ್ರಿಸ್ವಾಮಿಗೆ ಜಾಮೀನು ನೀಡಲು ಶನಿವಾರ ಸಿಬಿಐ ವಿಶೇಷ ನ್ಯಾಯಾಲಯ ನಿರಾಕರಿಸಿದೆ.

‘ನಾಲ್ಕೂ ಆರೋಪಿಗಳೂ ಗೊತ್ತಿದ್ದೇ ಕೃತ್ಯದಲ್ಲಿ ಭಾಗಿ­ಯಾಗಿ­ದ್ದಾರೆ. ಅವರು ತಿಳಿಯದೇ ತಪ್ಪು ಮಾಡಿದ್ದಾರೆ ಎಂಬ ವಾದ ಒಪ್ಪಲು ಸಾಧ್ಯವಿಲ್ಲ. ಈ ಹಂತದಲ್ಲಿ ಆರೋಪಿ­ಗಳಿಗೆ ಜಾಮೀನು ನೀಡಲಾಗದು’ ಎಂದು ಸಿಬಿಐ ವಿಶೇಷ ನ್ಯಾಯಾ­ಲ­ಯದ ನ್ಯಾಯಾ­ಧೀಶ ರವಿ.ಎಂ.ನಾಯಕ್‌ ಆದೇಶಿಸಿದ್ದಾರೆ.

ಬೇಲೆಕೇರಿ ಹಗರಣಕ್ಕೆ ಸಂಬಂಧಿ­ಸಿದ 2 ಪ್ರಕರಣಗಳಲ್ಲಿ ಯಲ್ಲಾ­ಪುರ ಶಾಸಕ ಶಿವರಾಮ ಹೆಬ್ಬಾರ್‌ ಪುತ್ರ ವಿವೇಕ್ ಹೆಬ್ಬಾರ್, ಸಂಬಂಧಿ ಪ್ರಕಾಶ್ ಹೆಗಡೆ, ಹೊಸಪೇಟೆಯ ಕೆ.ಜನಾರ್ದನ ರೆಡ್ಡಿ ಮತ್ತು ಐ.ಎರ್ರಿ­ಸ್ವಾಮಿಗೆ ಜಾಮೀನು ನಿರಾಕರಿಸಿ ಸಿಬಿಐ ವಿಶೇಷ ಕೋರ್ಟ್‌ ಗುರುವಾರ ಹಾಗೂ ಶುಕ್ರವಾರ ಎರಡು ಪ್ರತ್ಯೇಕ ಆದೇಶ ಹೊರಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.