ರೋಣ (ಗದಗ ಜಿಲ್ಲೆ): ಪತ್ನಿಯ ಸಾವಿನ ಸುದ್ದಿ ಕೇಳಿದ ಪತಿ ಒಂದು ಗಂಟೆಯ ಬಳಿಕ ಹೃದಯಘಾತದಿಂದ ಮೃತಪಟ್ಟ ಘಟನೆ ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕಾಗಿ ಈ ದಂಪತಿ ಗ್ರಾಮದ 25 ಜನರೊಡನೆ ಯಾತ್ರೆಗೆ ತೆರಳಿದ್ದರು. ದೇವಸ್ಥಾನದಿಂದ ಬಂದ ಬಳಿಕ ಪತ್ನಿ ಇಂದಿರಾಬಾಯಿ (59) ಬಳಲಿ ಹೃದಯಘಾತದಿಂದ ಮೃತಪಟ್ಟರೆ, ಬಸವಣ್ಣೆಪ್ಪ ಅಂದಾನಪ್ಪ ಉಗಲಾಟದ (65) ಒಂದು ಗಂಟೆಯ ಬಳಿಕ ಮೃತಪಟ್ಟಿದ್ದಾರೆ.
ದಂಪತಿಗೆ ಪುತ್ರಿ ಮತ್ತು ಇಬ್ಬರು ಪುತ್ರರು ಇದ್ದಾರೆ.