ವಿಜಾಪುರ: ನಗರದಲ್ಲಿ ಫೆಬ್ರುವರಿ 8ರಿಂದ 10ರ ವರೆಗೆ ನಡೆಯಲಿರುವ 79ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆ ಹಾಗೂ ವಾಣಿಜ್ಯ ಮಳಿಗೆ ಕಾಯ್ದಿರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಪುಸ್ತಕ ಮಳಿಗೆಗಾಗಿ ರೂ 1000, ವಾಣಿಜ್ಯ ಮಳಿಗೆಗಾಗಿ ರೂ 2000 ಡಿ.ಡಿ.ಯನ್ನು ಕೋಶಾಧ್ಯಕ್ಷರು, ಅಖಿಲ ಭಾರತ 79ನೆಯ ಕನ್ನಡ ಸಾಹಿತ್ಯ ಸಮ್ಮೇಳನ ವಿಜಾಪುರ ಹೆಸರಿನಲ್ಲಿ ಕಳುಹಿಸಿ ಮಳಿಗೆಗಳನ್ನು ಕಾಯ್ದಿರಿಸಬೇಕು.
ಮಾಹಿತಿಗೆ ವಿ.ಆರ್. ಬನಸೋಡೆ ಮೊ 90082 39566, ಯುವರಾಜ ಚೋಳಕೆ ಮೊ 94489 86295 ಸಂಪರ್ಕಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.