ADVERTISEMENT

ಸಿಪಿಐಎಂಎಲ್‌: 8 ಅಭ್ಯರ್ಥಿ ಸ್‍ಪರ್ಧೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ರಾಯಚೂರು: ಲೋಕಸಭಾ ಚುನಾವಣೆಗೆ ರಾಜ್ಯದ 8 ಕ್ಷೇತ್ರಗಳಲ್ಲಿ ಸಿಪಿಐ­ಎಂಎಲ್ ಪಕ್ಷವು ತನ್ನ ಅಭ್ಯರ್ಥಿ­ಗಳನ್ನು ಕಣಕ್ಕಿಳಿಸುತ್ತಿದೆ ಎಂದು ಸಿಪಿಐ­ಎಂಎಲ್ ಪಾಲಿಟ್‌ ಬ್ಯೂರೊ ರಾಜ್ಯ ಸಮಿತಿ ಸದಸ್ಯರಾದ ಆರ್. ಮಾನ­ಸಯ್ಯ ಮತ್ತು ರುದ್ರಯ್ಯ ಮಂಗಳವಾರ ಇಲ್ಲಿ ಪ್ರಕಟಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತ­ನಾ­ಡಿದ ಅವರು, ಮೈಸೂರು ಕ್ಷೇತ್ರದಿಂದ ಡಿ.ಎಸ್ ನಿರ್ವಾಣಪ್ಪ, ಚಾಮರಾಜ­ನ­ಗರ– ಶ್ರೀನಿವಾಸ ಕಂದೇಗಾಲ, ಶಿವ­ಮೊಗ್ಗ–ಪಿ ಮೂರ್ತಿ, ಕೊಪ್ಪಳ – ಕೆ ಡಿ.­ಎಚ್ ಪೂಜಾರ, ರಾಯಚೂರು–ಎಂ.­ನಾಗ­ರಾಜ, ಉಡುಪಿ– ಚಿಕ್ಕ­ಮಗ­ಳೂರು: ಜಗದೀಶ, ಮತ್ತು ಬಳ್ಳಾರಿ ಕ್ಷೇತ್ರ­­­­ದಿಂದ– ಮಲ್ಲಿನಾಥ ಸ್ಪರ್ಧಿಸು­ತ್ತಿದ್ದು, ಬೆಂಗಳೂರು ಉತ್ತರ ಕ್ಷೇತ್ರ­ದಿಂದ ತಾವೇ ಟಿಕೆಟ್ ಬಯಸಿದ್ದು, ಪಕ್ಷ ಇನ್ನೂ ಅಂತಿಮ ತೀರ್ಮಾನ ಮಾಡಿಲ್ಲ ಎಂದು ಆರ್.ಮಾನಸಯ್ಯ ಹೇಳಿ­ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.