ADVERTISEMENT

ಹಲ್ಲೆ ಪ್ರಕರಣ: ನಲಪಾಡ್, ಸಹ ಆರೋಪಿಗಳ ಜಾಮೀನು ಅರ್ಜಿ; ಶೀಘ್ರ ವಿಚಾರಣೆ ನಿರಾಕರಿಸಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 7:47 IST
Last Updated 5 ಮಾರ್ಚ್ 2018, 7:47 IST
ಹಲ್ಲೆ ಪ್ರಕರಣ: ನಲಪಾಡ್, ಸಹ ಆರೋಪಿಗಳ ಜಾಮೀನು ಅರ್ಜಿ; ಶೀಘ್ರ ವಿಚಾರಣೆ ನಿರಾಕರಿಸಿದ ಹೈಕೋರ್ಟ್‌
ಹಲ್ಲೆ ಪ್ರಕರಣ: ನಲಪಾಡ್, ಸಹ ಆರೋಪಿಗಳ ಜಾಮೀನು ಅರ್ಜಿ; ಶೀಘ್ರ ವಿಚಾರಣೆ ನಿರಾಕರಿಸಿದ ಹೈಕೋರ್ಟ್‌   

ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ನಲಪಾಡ್ ಮತ್ತು ಸಹ ಆರೋಪಿಗಳಿಂದ ಜಾಮೀನು ಕೋರಿ ಹೈಕೋರ್ಟ್‌ಗೆ ಸಲ್ಲಿಸಲಾದ ಅರ್ಜಿ ವಿಚಾರಣೆ ಮುಂದಾಡಲಾಗಿದೆ.

ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ನಲಪಾಡ್ ಮತ್ತು ಸಹ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದೆ. ಇಂದೇ 2:30ಕ್ಕೆ ವಿಚಾರಣೆ ನಡೆಸುವಂತೆ ನಲಪಾಡ್ ಪರ ವಕೀಲ ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ಮನವಿ ಮಾಡಿದರು.

ಆದರೆ, ನ್ಯಾ.ಶ್ರೀನಿವಾಸ ಹರೀಶ್ ಕುಮಾರ್ ಅವರು ಶೀಘ್ರ ವಿಚಾರಣೆಗೆ ನಿರಾಕರಿಸಿದರು.

ADVERTISEMENT

ಹೈಕೋರ್ಟ್‌ ಮಾ.7 ಕ್ಕೆ ವಿಚಾರಣೆ ನಿಗದಿ ಪಡಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.