ರೋಣ: ತಾಲ್ಲೂಕಿನ ಹುಲ್ಲೂರು ಗ್ರಾಮದಲ್ಲಿ ವಿದ್ಯುತ್ ತಂತಿಗಳ ಘರ್ಷಣೆಯಿಂದ ದನದ ಕೊಟ್ಟಿಗೆಗೆ ಬೆಂಕಿ ಬಿದ್ದು ಜೋಡಿ ಎತ್ತುಗಳು ಮೃತಪಟ್ಟಿದ್ದರೆ, ಮೂರು ಎಮ್ಮೆಗಳಿಗೆ ತೀವ್ರ ಸುಟ್ಟ ಗಾಯಗಳಾಗಿವೆ.
ಯಲ್ಲಪ್ಪ.ಪ.ಬ್ಯಾಳಿ ಎಂಬ ರೈತರಿಗೆ ಸೇರಿದ ದನದ ಕೊಟ್ಟಿಗೆಗೆ ಭಾನುವಾರ ಮಧ್ಯರಾತ್ರಿ ವಿದ್ಯುತ್ ತಂತಿಗಳಿಂದ ಹೊತ್ತಿದ ಘರ್ಷಣೆಯಿಂದ ಬೆಂಕಿ ಹೊತ್ತುಕೊಂಡು ಮೇವು ಮತ್ತು ಹೊಟ್ಟಿನ ಬಣವಿಗಳಿಗೆ ಬೆಂಕಿ ವ್ಯಾಪಿಸಿತು. ಪಕ್ಕದಲ್ಲಿಯೇ ಕಟ್ಟಿದ್ದ ಜಾನುವಾರುಗಳು ಬೆಂಕಿಯ ಕೆನ್ನಾಲೆಗೆಗಿ ಬಲಿಯಾಗಿವೆ.
ಕಾರಹುಣ್ಣಿಮೆಯ ದಿನವೇ ಬೆಲೆ ಬಾಳುವ ಜೋಡೆತ್ತು ಸತ್ತಿರುವುದರನ್ನು ಕಂಡು ಗ್ರಾಮಸ್ಥರು ಮಮ್ಮಲ ಮರುಗಿದರು.ಅಂದಾಜು ₹ 3 ಲಕ್ಷ ಮೌಲ್ಯದ ಜಾನುವಾರುಗಳಿಗೆ ಹಾನಿಯಾಗಿದೆ. ಎತ್ತುಗಳನ್ನು ಕಳೆದುಕೊಂಡ ರೈತನ ಕುಟುಂಬದವರು ಕಣ್ಣೀರುಗರೆದರು. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.