ಬೆಂಗಳೂರು: 2020 ಮತ್ತು 2021ರಲ್ಲಿ ರಾಜ್ಯದ ಪೊಲೀಸರು ವಿವಿಧೆಡೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿರುವ ₹ 50.23ಕೋಟಿ ಮೌಲ್ಯದ ವಿವಿಧ ಮಾದಕವಸ್ತುಗಳನ್ನು ‘ಅಂತರರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನ’ವಾದ ಶನಿವಾರ ನಾಶಪಡಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳ ಜತೆ ಶುಕ್ರವಾರ ಮಾತನಾಡಿದ ಅವರು, ‘23,829 ಕೆ.ಜಿ. ಗಾಂಜಾ, 34.4 ಕೆ.ಜಿ. ಪೊಪ್ಪಿ, 1 ಕೆ.ಜಿ. ಬ್ರೌನ್ ಷುಗರ್, 161.34 ಕೆ.ಜಿ. ಓಪಿಯಂ, 6.15 ಕೆ.ಜಿ. ಹಶೀಶ್, 5.2 ಕೆ.ಜಿ. ಚರಸ್, ಎಂಡಿಎಂಎ ಪುಡಿ, ಮಾತ್ರೆಗಳು, ಕೊಕೇನ್, ಎಲ್ಎಸ್ಡಿ ಹಾಳೆಗಳನ್ನು ಶನಿವಾರ ಏಕಕಾಲಕ್ಕೆ ನಾಶಪಡಿಸಲಾಗುವುದು’ ಎಂದರು.
‘ನಾನು ಪರೀಕ್ಷೆ ಬರೆದಿಲ್ಲ’: ‘ಮುಖ್ಯಮಂತ್ರಿ ಬದಲಾವಣೆ ಪರೀಕ್ಷೆ ಬರೆದಿದ್ದೇವೆ’ ಎಂಬ ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ನಾನು ಪರೀಕ್ಷೆ ಬರೆದಿಲ್ಲ. ಯಾವ ಫಲಿತಾಂಶವನ್ನೂ ನಿರೀಕ್ಷಿಸಿಲ್ಲ. ಯಾವುದರ ಆಕಾಂಕ್ಷಿಯೂ ಅಲ್ಲ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.