ADVERTISEMENT

ಶವದ ಮೇಲೆ ರಾಜಕೀಯ ಬೇಡ, ಶಾಂತಿ ಕಾಪಾಡಿ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 6:59 IST
Last Updated 7 ಜನವರಿ 2018, 6:59 IST
ಶವದ ಮೇಲೆ ರಾಜಕೀಯ ಬೇಡ, ಶಾಂತಿ ಕಾಪಾಡಿ: ಸಿಎಂ ಸಿದ್ದರಾಮಯ್ಯ
ಶವದ ಮೇಲೆ ರಾಜಕೀಯ ಬೇಡ, ಶಾಂತಿ ಕಾಪಾಡಿ: ಸಿಎಂ ಸಿದ್ದರಾಮಯ್ಯ   

ಬೆಳ್ತಂಗಡಿ: ಮನುಷ್ಯತ್ವ ಇಲ್ಲದವರು, ಮನುಷ್ಯ ದ್ವೇಷಿಗಳು ಕೊಲ್ಲುತ್ತಾರೆ. ಯಾರೂ ಈ ವಿಚಾರದಲ್ಲಿ ಪ್ರಚೋದನೆ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭಾನುವಾರ ಬೆಳ್ತಂಗಡಿಯಲ್ಲಿ ವಿವಿಧ ಯೋಜನೆ ಹಾಗೂ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ದೀಪಕ್‌ ರಾವ್‌ ಹತ್ಯೆ ಹಾಗೂ ಬಶೀರ್‌ ಸಾವಿನ ಕುರಿತು ಪ್ರತಿಕ್ರಿಯಿಸಿದ ಅವರು, ಶವದ ಮೇಲೆ ರಾಜಕೀಯ ಮಾಡಬಾರದು. ಜನತೆ ಶಾಂತಿ ಕಾಪಾಡಬೇಕು ಎಂದರು.

ADVERTISEMENT

ಇಲ್ಲಿನ ಸಮಾವೇಶದಲ್ಲಿ ಕಾರ್ಯಕ್ರಮದ ಪ್ರಾರಂಭದಲ್ಲಿ ಸಿಎಂ ಮನವಿಯಂತೆ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು.

ಸಂಘ ಪರಿವಾರದವರೇ ಹಿಂದೂಗಳ ಹತ್ಯೆ ಮಾಡಿದ್ದಾರೆ ಎಂದು ಅರಣ್ಯ ಸಚಿವ ರನಾನಾಥ ರೈ ಹೇಳಿದ್ದಾರೆ. ಬೆಳ್ತಂಗಡಿಯಲ್ಲಿ ಸಿಎಂ ಮಾಧ್ಯಮದವರ ಜತೆಗೆ ಮಾತನಾಡುತ್ತಿದ್ದಾಗ ಮುಖ್ಯಮಂತ್ರಿ ಅವರ ಕಿವಿಯಲ್ಲಿ ಸಚಿವ ರೈ ಉಸುರಿದ ಮಾತು ಮಾಧ್ಯಮಗಳಲ್ಲಿ ಪ್ರಸಾರಗೊಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.