ADVERTISEMENT

ತಲವಾರಿನಿಂದ ಹಲ್ಲೆಯತ್ನ ಆರೋಪ: ದೂರಿನ ಬಗ್ಗೆ ಸಂಶಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 3:29 IST
Last Updated 9 ಜನವರಿ 2018, 3:29 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಮಂಗಳೂರು: ತನ್ನ ಮೇಲೆ ಕೆಲವರು ತಲವಾರಿನಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಸುರತ್ಕಲ್ ಘಟಕದ ಸಹ ಸಂಚಾಲಕ ಭರತ್ ರಾಜ್ ಅಗರಮೇಲು ಸುರತ್ಕಲ್ ಪೊಲೀಸ್ ಠಾಣೆಗೆ ಸೋಮವಾರ ನೀಡಿರುವ ದೂರಿನ ಬಗ್ಗೆ ಸಂಶಯ ವ್ಯಕ್ತವಾಗಿದೆ.

'ದೂರಿನಲ್ಲಿ ನೀಡಿರುವ‌ ಮಾಹಿತಿಗೂ ದೂರುದಾರರ ವಿಚಾರಣೆ ವೇಳೆ ನೀಡುತ್ತಿರುವ ಹೇಳಿಕೆಗೂ ಹೋಲಿಕೆ‌ಯಾಗುತ್ತಿಲ್ಲ. ದೂರಿನ ಕುರಿತು ಈಗ ಸಂಶಯ ಉಂಟಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ' ಎಂದು ಮಂಗಳೂರು ನಗರ‌ ಕಾನೂನು ಸುವ್ಯವಸ್ಥೆ ಡಿಸಿಪಿ ಹನುಮಂತರಾಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT