ADVERTISEMENT

ಮಹದಾಯಿ: ಪ್ರಧಾನಿ ಬಳಿಗೆ ಮತ್ತೊಮ್ಮೆ ರೈತರ ನಿಯೋಗ ಕರೆದೊಯ್ಯಲು ಒತ್ತಾಯಿಸಿ ಸಿಎಂ ಮನೆ ಬಳಿ ರೈತರ ಧರಣಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 7:42 IST
Last Updated 11 ಜನವರಿ 2018, 7:42 IST
ಮಹದಾಯಿ: ಪ್ರಧಾನಿ ಬಳಿಗೆ ಮತ್ತೊಮ್ಮೆ ರೈತರ ನಿಯೋಗ ಕರೆದೊಯ್ಯಲು ಒತ್ತಾಯಿಸಿ ಸಿಎಂ ಮನೆ ಬಳಿ ರೈತರ ಧರಣಿ
ಮಹದಾಯಿ: ಪ್ರಧಾನಿ ಬಳಿಗೆ ಮತ್ತೊಮ್ಮೆ ರೈತರ ನಿಯೋಗ ಕರೆದೊಯ್ಯಲು ಒತ್ತಾಯಿಸಿ ಸಿಎಂ ಮನೆ ಬಳಿ ರೈತರ ಧರಣಿ   

ಬೆಂಗಳೂರು: ಮಹದಾಯಿ ನೀರಿಗಾಗಿ ಪ್ರಧಾನಿ ಬಳಿಗೆ ಮತ್ತೊಮ್ಮೆ ರೈತರ ನಿಯೋಗ ಕರೆದೊಯ್ಯಲು ಒತ್ತಾಯಿಸಿ ಮುಖ್ಯಮಂತ್ರಿ ಮನೆ ಬಳಿ ರೈತರ ಹೋರಾಟ ಆರಂಭವಾಗಿದ್ದು, ಕುಮಾರಕೃಪಾ ಆವರಣದಲ್ಲಿ ರೈತರು ಧರಣಿ ನಡೆಸುತ್ತಿದ್ದಾರೆ.

ಮುಖ್ಯಮಂತ್ರಿ ಬರುವ ತನಕ ಧರಣಿ ಮುಂದುವರಿಸಲು ತೀರ್ಮಾನ ಕೈಗೊಂಡಿದ್ದಾರೆ.

ರೈತರ ಧರಣಿ ಸ್ಥಳಕ್ಕೆ ರಾಮದುರ್ಗ ಶಾಸಕ ಅಶೋಕ ಪಟ್ಟಣ್ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ‌ಜಿಲ್ಲೆ ಪ್ರವಾಸದಲ್ಲಿದ್ದಾರೆ. ರೈತರನ್ನು ಅಲ್ಲಿಗೇ ಕರೆದೊಯ್ದು ಭೇಟಿ ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಅಶೋಕ ಪಟ್ಟಣ್ ಜೊತೆ ಮೈಸೂರಿಗೆ ಹೋಗಲು ರೈತರು ಒಪ್ಪಿದರು.

ADVERTISEMENT

ರಾತ್ರಿ 8ರ ಸುಮಾರಿಗೆ‌ ಮುಖ್ಯಮಂತ್ರಿ ಅವರ ಮೈಸೂರು‌ ಮನೆಯಲ್ಲಿ ಮಹದಾಯಿ ಹೋರಾಟಗಾರರು ಭೇಟಿಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.