ADVERTISEMENT

ವಾಟ್ಸ್ಆ್ಯಪ್‌ನಲ್ಲಿ ಅವಹೇಳನಕಾರಿ ಪೋಸ್ಟ್‌: ಫೊಟೋಗ್ರಾಫರ್ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 6:22 IST
Last Updated 18 ಜನವರಿ 2018, 6:22 IST
ಸುಧಾಕರ ಎರ್ಮಾಳ
ಸುಧಾಕರ ಎರ್ಮಾಳ   

ಮಂಗಳೂರು: ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಅವಹೇಳನಕಾರಿ ಸಂದೇಶ ಹಾಕಿದ ನಗರದ ಪತ್ರಿಕೆಯೊಂದರ ಫೊಟೋಗ್ರಾಫರ್ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೀಡಿಯಾ ಆಂಡ್ ರೈ ಸರ್ ಎನ್ನುವ ಗ್ರೂಪ್ ನಲ್ಲಿ ಫೊಟೋಗ್ರಾಫರ್ ಸುಧಾಕರ ಎರ್ಮಾಳ, ಧರ್ಮವನ್ನು ಅವಹೇಳನ ಮಾಡುವ ಪೋಸ್ಟ್ ಹಾಕಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಪುರಸಭೆ ಸದಸ್ಯ ಮುನೀಶ್ ಅಲಿ ಅಹ್ಮದ್ ಸೋಮವಾರ ದೂರು ದಾಖಲಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿರುವ ಪೊಲೀಸರು, ಈ ಸಂದೇಶ ಹಾಕಿರುವ ಸುಧಾಕರ ಎರ್ಮಾಳಗಾಗಿ ಹುಡುಕಾಟ ನಡೆಸಿದ್ದಾರೆ. ಬುಧವಾರ ರಾತ್ರಿ ಎರ್ಮಾಳ ಅವರ ಮನೆಗೆ ಹೋಗಿದ್ದ ಪೊಲೀಸರು, ಬರುಗೈಲಿ ಹಿಂದಿರುಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.