ADVERTISEMENT

ಶಿರಸಿಯಲ್ಲಿ ಬೆಂಕಿ ಅನಾಹುತ: ₹15 ಲಕ್ಷಕ್ಕೂ ಅಧಿಕ ನಷ್ಟ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 4:41 IST
Last Updated 28 ಜನವರಿ 2018, 4:41 IST
ಶಿರಸಿಯಲ್ಲಿ ಬೆಂಕಿ ಅನಾಹುತ: ₹15 ಲಕ್ಷಕ್ಕೂ ಅಧಿಕ ನಷ್ಟ
ಶಿರಸಿಯಲ್ಲಿ ಬೆಂಕಿ ಅನಾಹುತ: ₹15 ಲಕ್ಷಕ್ಕೂ ಅಧಿಕ ನಷ್ಟ   

ಶಿರಸಿ: ಇಲ್ಲಿನ ಟಿ.ಎಸ್.ಎಸ್ ಹತ್ತಿರ ಇರುವ ರಾಘವೇಂದ್ರ ಸ್ವಾಮಿ ಟ್ರೇಡರ್ಸ್, ಅಡಿಕೆ ವಕಾರಿಯಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಅಡಿಕೆ ಚೀಲಗಳು ಬೆಂಕಿಗೆ ಆಹುತಿಯಾಗಿವೆ.

₹15 ಲಕ್ಷಕ್ಕೂ ಅಧಿಕ ಮಾಲು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ವಿವೇಕ ಪೈ ಅವರಿಗೆ ಸೇರಿದ ವಕಾರಿ ಇದಾಗಿದೆ. ವಿದ್ಯುತ್ ಶಾಟ್೯ ಸರ್ಕೀಟ್‌ನಿಂದ ಅನಾಹುತ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.

ADVERTISEMENT

ಟ್ರಕ್‌–ಬೈಕ್‌ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು

ಶಿರಸಿ: ತಾಲ್ಲೂಕಿನ ಸಂಪಖಂಡದ ಸಮೀಪ ಭಾನುವಾರ ಬೆಳಿಗ್ಗೆ ಬೈಕ್ ಹಾಗೂ ಟ್ರಕ್ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬೈಕ್ ಸವಾರ ಕುಮಟಾದ ಅಬು ಅಹ್ಮದ್ ಬಂಡಿ ಮೃತಪಟ್ಟವರು. ಹಿಂಬದಿ ಸವಾರ ಸಲೀಂ ಅಬುಬುಕರ್ ಗಂಭೀರ ಗಾಯಗೊಂಡಿದ್ದಾರೆ.
ಅವರು ಕುಮಟಾದಿಂದ ಶಿರಸಿಗೆ ಬರುತ್ತಿರುವಾಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.