ADVERTISEMENT

ಯಡಿಯೂರಪ್ಪನವರ ಕೊಳೆಗೇರಿ ವಾಸ್ತವ್ಯ ಕೇವಲ ಚುನಾವಣಾ ಗಿಮಿಕ್‌: ಸಿ.ಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 9:56 IST
Last Updated 10 ಫೆಬ್ರುವರಿ 2018, 9:56 IST
ಯಡಿಯೂರಪ್ಪನವರ ಕೊಳೆಗೇರಿ ವಾಸ್ತವ್ಯ ಕೇವಲ ಚುನಾವಣಾ ಗಿಮಿಕ್‌: ಸಿ.ಎಂ ಸಿದ್ದರಾಮಯ್ಯ
ಯಡಿಯೂರಪ್ಪನವರ ಕೊಳೆಗೇರಿ ವಾಸ್ತವ್ಯ ಕೇವಲ ಚುನಾವಣಾ ಗಿಮಿಕ್‌: ಸಿ.ಎಂ ಸಿದ್ದರಾಮಯ್ಯ   

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯುಡಿಯೂರಪ್ಪ ಅವರು ಕೈಗೊಂಡಿರುವ ಕೊಳೆಗೇರಿ ವಾಸ್ತವ್ಯ ಕೇವಲ ಚುನಾವಣಾ ಗಿಮಿಕ್‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ಅವರು ‘ಬಿ.ಎಸ್‌.ಯಡಿಯೂರಪ್ಪ ಮತ್ತು ಬಿಜೆಪಿ ಪಕ್ಷದ ನಾಯಕರು ಕೊಳೆಗೇರಿಗಳಲ್ಲಿ ವಾಸ್ತವ್ಯ ಹೂಡುತ್ತಿರುವುದು ಕೇವಲ ಚುನಾವಣಾ ಗಿಮಿಕ್‌ ಆಗಿದೆ. ದಲಿತರ ಮನೆಗೆ ಹೋಗುವುದಕ್ಕೂ ಮೊದಲು ಬಿಜೆಪಿಯವರು ದಲಿತರಿಗಾಗಿ ಏನು ಮಾಡಿದ್ದಾರೆ ಎನ್ನುವುದನ್ನು ತಿಳಿಸುವ ಧೈರ್ಯ ಮಾಡಬಹುದಾ?’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT