ADVERTISEMENT

ಶಿರಸಿಯಲ್ಲಿ ಅಂಗಡಿಗೆ ಬೆಂಕಿ: ₹10 ಲಕ್ಷ ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2018, 4:10 IST
Last Updated 12 ಫೆಬ್ರುವರಿ 2018, 4:10 IST

ಶಿರಸಿ: ಅಂಗಡಿಗೆ ಆಕಸ್ಮಿಕ ಬೆಂಕಿಬಿದ್ದು ಅಂಗಡಿಯಲ್ಲಿದ್ದ ವಸ್ತುಗಳು ಭಸ್ಮಗೊಂಡಿವೆ.

ಇಲ್ಲಿನ ನಿಲೇಕಣಿಯಲ್ಲಿರುವ ವಾಮನ ಮೂಡಲಗಿ ಅವರಿಗೆ ಸೇರಿದ ಜಾಗದಲ್ಲಿ ತಿಮ್ಮಪ್ಪ ರಾಮಚಂದ್ರ ಕುಮಟಾ ಅಂಗಡಿ ನಡೆಸುತ್ತಿದ್ದರು. ಈ ಅಂಗಡಿಯಲ್ಲಿ ರಾತ್ರಿ 10.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು.

ಅಂಗಡಿ ಒಳಗಿದ್ದ ₹15ಸಾವಿರ ನಗದು, ₹10ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ADVERTISEMENT

ಸಮೀಪದಲ್ಲಿಯೇ ಪೆಟ್ರೋಲ್ ಬಂಕ್ ಇದ್ದಿದ್ದರಿಂದ ಬೆಂಕಿಯ ಜ್ವಾಲೆ ಜೋರಾಗುತ್ತಿದ್ದಂತೆ ಸುತ್ತಲಿನ ಜನ ಆತಂಕಗೊಂಡರು. ತಕ್ಷಣ‌ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.