ADVERTISEMENT

ಸಿದ್ದರಾಮಯ್ಯ ಪ್ರಧಾನಿ ಆಗಿದ್ದರೆ ಯಾವ ಕಳ್ಳನೂ ದೇಶ ಬಿಡುತ್ತಿರಲಿಲ್ಲ, ಅವರೊಂದಿಗೆ ನಾಟಿ ಕೋಳಿ ಸಾರು ತಿಂದು ಸುಖವಾಗಿರುತ್ತಿದ್ದರು: ಪ್ರತಾಪ್‌ ಸಿಂಹ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 13:49 IST
Last Updated 20 ಫೆಬ್ರುವರಿ 2018, 13:49 IST
ಸಿದ್ದರಾಮಯ್ಯ ಪ್ರಧಾನಿ ಆಗಿದ್ದರೆ ಯಾವ ಕಳ್ಳನೂ ದೇಶ ಬಿಡುತ್ತಿರಲಿಲ್ಲ, ಅವರೊಂದಿಗೆ ನಾಟಿ ಕೋಳಿ ಸಾರು ತಿಂದು ಸುಖವಾಗಿರುತ್ತಿದ್ದರು: ಪ್ರತಾಪ್‌ ಸಿಂಹ
ಸಿದ್ದರಾಮಯ್ಯ ಪ್ರಧಾನಿ ಆಗಿದ್ದರೆ ಯಾವ ಕಳ್ಳನೂ ದೇಶ ಬಿಡುತ್ತಿರಲಿಲ್ಲ, ಅವರೊಂದಿಗೆ ನಾಟಿ ಕೋಳಿ ಸಾರು ತಿಂದು ಸುಖವಾಗಿರುತ್ತಿದ್ದರು: ಪ್ರತಾಪ್‌ ಸಿಂಹ   

ಬೆಂಗಳೂರು: ಸಿದ್ದರಾಮಯ್ಯ ಅವರು ಪ್ರಧಾನಿ ಆಗಿದ್ದರೆ ಯಾವ ಕಳ್ಳನೂ ದೇಶ ಬಿಡುತ್ತಿರಲಿಲ್ಲ, ಅವರೊಂದಿಗೆ ನಾಟಿ ಕೋಳಿ ಸಾರು ತಿಂದು ಸುಖವಾಗಿರುತ್ತಿದ್ದರು ಎಂದು ಸಂಸದ ಪ್ರತಾಪ್‌ ಸಿಂಹ ವ್ಯಂಗ್ಯವಾಡಿದ್ದಾರೆ.

₹11,500 ಕೋಟಿ ವಂಚನೆ ಮಾಡಿ ದೇಶದಿಂದ ಪರಾರಿಯಾಗಿರುವ ನೀರವ್‌ ಮೋದಿ ವಿಚಾರವನ್ನು ಪ್ರಸ್ತಾಪಿಸಿ ಪ್ರಧಾನಿ ಮೋದಿ ಅವರನ್ನು ಟೀಕಿಸಿ ಸಿಎಂ ಸಿದ್ದರಾಮಯ್ಯ ಮಾಡಿರುವ ಟ್ವೀಟ್‌ಗೆ ಪ್ರತಾಪ್‌ ಸಿಂಹ ಪ್ರತಿಕ್ರಿಯಸಿದ್ದಾರೆ.

‘ಸಿದ್ದರಾಮಯ್ಯನವರೇ, ನೀವು ಪ್ರಧಾನಿಯಾಗಿದ್ದರೆ ಯಾವ ಕಳ್ಳನೂ ದೇಶ ಬಿಟ್ಟು ಓಡಿ ಹೋಗುತ್ತಿರಲಿಲ್ಲ, ನಿಮ್ಮ ಜೊತೆನೇ ನಾಟಿ ಕೋಳಿ ಸಾರು ತಿಂದುಕೊಂಡು ಸುಖವಾಗಿ ಇರುತ್ತಿದ್ದರು, ಹೈಕಮಾಂಡ್‌ಗೆ ಆಗಾಗ್ಗೆ ಸೂಟ್ಕೇಸ್ ಕಳಿಸಿಕೊಟ್ಟಿದ್ದರೆ ಸಾಕಿತ್ತು!’ ಎಂದು ಟ್ವೀಟಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.