ADVERTISEMENT

ಹೊಸ ತಿರುವು ಪಡೆದ ‘ಆಪರೇಷನ್‌ ಕಮಲ’ ಪ್ರಕರಣ: ಎಚ್‌ಡಿಕೆ ವಿರುದ್ಧ ಎಸಿಬಿಗೆ ದೂರು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 19:48 IST
Last Updated 21 ಫೆಬ್ರುವರಿ 2019, 19:48 IST
   

ಬೆಂಗಳೂರು: ಕೋಲಾರ ಶಾಸಕ ಶ್ರೀನಿವಾಸಗೌಡರನ್ನು ಪಕ್ಷಾಂತರ ಮಾಡಿಸಲು ₹ 25 ಕೋಟಿ ಆಮಿಷವೊಡ್ಡಿ ₹ 5 ಕೋಟಿ ಮುಂಗಡ ಕೊಡಲಾಗಿತ್ತು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಲಾಗಿದೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ನೀಡಿರುವ ದೂರಿನಲ್ಲಿ, ಬಿಜೆಪಿಯ ಹಾಲಿ ಶಾಸಕರಾದ ಅಶ್ವತ್ಥ ನಾರಾಯಣ, ಎಸ್‌. ಆರ್‌. ವಿಶ್ವನಾಥ್‌ ಹಾಗೂ ಮಾಜಿ ಶಾಸಕ ಸಿ.ಪಿ. ಯೋಗೀಶ್ವರ ಅವರನ್ನು ಹೆಸರಿಸಲಾಗಿದೆ. ಇದರಿಂದಾಗಿ ‘ಆಪರೇಷನ್‌ ಕಮಲ’ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT