ADVERTISEMENT

ಅಪಘಾತ: ಏಳು ಸಾವು

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:04 IST
Last Updated 2 ಜೂನ್ 2019, 19:04 IST
ಕಾರು ನುಜ್ಜುಗುಜ್ಜಾಗಿರುವುದು
ಕಾರು ನುಜ್ಜುಗುಜ್ಜಾಗಿರುವುದು   

ಬೆಳಗಾವಿ: ಹೊರವಲಯದ ಶ್ರೀನಗರ ಬಳಿಯ ರಾಷ್ಟ್ರೀಯ ಹೆದ್ದಾರಿ–4ರಲ್ಲಿ ಕಾರಿನ ಟೈರ್‌ ಸಿಡಿದು , ಇನ್ನೊಂದು ಬದಿಯಲ್ಲಿ ಸಾಗುತ್ತಿದ್ದ ಲಾರಿಗೆ ಡಿಕ್ಕಿಯಾದ ಪರಿಣಾಮ ಚಾಲಕ ಸೇರಿ ಐವರು ಸ್ಥಳದಲ್ಲಿ, ಇಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟರು.

ಮೃತರನ್ನು ಔರಂಗಾಬಾದ್ ದೇವಗಿರಿಯ ನಿವಾಸಿಗಳಾದ ಎನ್ನಲಾದ ನಂದು ಪವಾರ್, ಅಮೂಲ ನಾವಿ, ಸುರೇಶ್ ಕಾನೇರಿ, ಅಮೂಲ ಚೌರಿ, ಮಹೇಶ್ ಚೌರಿ, ಗೋಪಿನಾಥ್ ಹಾಗೂ ರವೀಂದ್ರ ಎಂದು ಗುರುತಿಸಲಾಗಿದೆ. ಇವರೆಲ್ಲರೂ 25ರಿಂದ 35ರ ವಯಸ್ಸಿನವರು. ಕೊಲ್ಹಾಪುರದಿಂದ ಗೋವಾಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದರು.

ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್, ಡಿಸಿ‍ಪಿ ಯಶೋದಾ ಒಂಟಗೋಡಿ, ಎಸಿಪಿ ಎನ್.ವಿ. ಭರಮನಿ ಭೇಟಿ ನೀಡಿ ಪರಿಶೀಲಿಸಿದರು.ಘಟನೆಯಿಂದಾಗಿ, ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.