ಮಂಡ್ಯ: ಬಂಡೂರು ಕುರಿ ತಳಿಗೆ ಪ್ರಸಿದ್ಧಿ ಪಡೆದಿರುವ ಮಳವಳ್ಳಿ ತಾಲ್ಲೂಕು, ಕಿರುಗಾವಲು ಸಂತೆಯಲ್ಲಿ ಶನಿವಾರ ಶ್ರೀನಿವಾಸಪುರ ಶಾಸಕ, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಬಂಡೂರು ಕುರಿ ಖರೀದಿಸಿದರು.
ವರಕೋಡು ಗ್ರಾಮದ ರೈತ ಸ್ವಾಮಿ ಅವರಿಂದ ₹ 25 ಸಾವಿರಕ್ಕೆ ಕುರಿ ಮರಿ ಖರೀದಿಸಿದರು. ಬೆಳಿಗ್ಗೆಯೇ ಬಂದಿದ್ದ ಅವರು ಸಂತೆಯಲ್ಲಿ ಸುತ್ತಾಡಿ ವಿವಿಧ ತಳಿಯ ಕುರಿಗಳನ್ನು ಕಂಡ ಸಂತಸ ವ್ಯಕ್ತಪಡಿಸಿದರು. ಈ ಹಿಂದೆಯೂ ಅವರು ಹಲವು ಸಂತೆಗಳಿಗೆ ಭೇಟಿ ನೀಡಿ ಕುರಿ ಖರೀದಿ ಮಾಡಿದ್ದರು.
ಇದನ್ನೂ ಓದಿ: ನೀವು ಕುರಿ ಸಾಕಣೆದಾರರೇ? ತೂಕಕ್ಕೆ ತಕ್ಕ ಬೆಲೆ ಪಡೆಯಲು ಪೇರೇಸಂದ್ರಕ್ಕೆ ಬನ್ನಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.