ಬೆಂಗಳೂರು: ಅಂಜನ್ ಪಾತ್ ಲ್ಯಾಬ್ಸ್ ಆ್ಯಂಡ್ ಅಲರ್ಜಿ ಟೆಸ್ಟಿಂಗ್ ಸೆಂಟರ್, ಕರ್ನಾಟಕದಲ್ಲಿ ರಿಯಾಯಿತಿ ದರದಲ್ಲಿ ಅಲರ್ಜಿ ಪರೀಕ್ಷೆ ನಡೆಸಲು ಉದ್ದೇಶಿಸಿದೆ.
‘ದಾವಣಗೆರೆ, ಗಂಗಾವತಿ, ಹೊಸಪೇಟೆ, ಕಡೂರು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಉಡುಪಿ, ಕೋಲಾರ, ಚಿಂತಾಮಣಿ, ಹುಬ್ಬಳ್ಳಿ, ಗೋಕಾಕ, ಬೆಳಗಾವಿ, ಕಾರವಾರ, ಕುಮಟ, ಬಳ್ಳಾರಿ, ಯಾದಗಿರಿ, ಬೀದರ್, ವಿಜಯಪುರ, ರಾಯಚೂರು, ಮಹಾಲಿಂಗಪುರ, ಬೈಲಹೊಂಗಲ, ಮಂಗಳೂರು, ಮಂಡ್ಯ, ನಾಗಮಂಗಲ, ಕಗ್ಗದಾಸಪುರ, ಗದಗ, ಲಕ್ಷ್ಮೇಶ್ವರ, ಬೆಂಗಳೂರು, ಖಾನಾಪುರ, ಹರಿಹರ, ಸಾಗರ, ಕಲಬುರ್ಗಿ, ಚಿತ್ರದುರ್ಗ, ಗುಬ್ಬಾಳ ಹಾಗೂ ಧಾರವಾಡದಲ್ಲಿ ಅಂಜನ್ ಲ್ಯಾಬ್ಸ್ನ ಕೇಂದ್ರಗಳಿವೆ. ಇಲ್ಲಿ ಇದೇ 19, 20, 21 ಹಾಗೂ 22ರಂದು ಪರೀಕ್ಷೆ ಮಾಡಿಸಿಕೊಂಡವರಿಗೆ ಶೇ 50ಕ್ಕಿಂತಲೂ ಹೆಚ್ಚಿನ ರಿಯಾಯಿತಿ ದೊರೆಯಲಿದೆ’ ಎಂದು ಪ್ರಕಟಣೆ ತಿಳಿಸಿದೆ.
‘ಅಲರ್ಜಿಯನ್ನು ಕಡೆಗಣಿಸುವಂತಿಲ್ಲ. ಅದರಿಂದ ಪ್ರಾಣಕ್ಕೆ ಕುತ್ತು ಎದುರಾಗಬಹುದು. ವ್ಯಕ್ತಿಗೆ ಯಾವ ಬಗೆಯ ಅಲರ್ಜಿ ಇದೆ ಎಂಬುದನ್ನು ಪತ್ತೆಹಚ್ಚುವುದು ಹಿಂದೆಲ್ಲಾ ಬಹಳ ಕಷ್ಟವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ರಕ್ತ ಪರೀಕ್ಷೆಯಿಂದಲೇ ಇದನ್ನು ಕಂಡುಹಿಡಿಯಬಹುದು. ಇದು ಗುಣಪಡಿಸಬಹುದಾದ ಕಾಯಿಲೆ’ ಎಂದು ಡಾ.ಪ್ರಶಾಂತ್ ಜೇರತ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.