ಬೆಂಗಳೂರು: ಜಲಮಂಡಳಿಯ ಕಾರ್ಯಚಟುವಟಿಕೆಗಳ ಬಗ್ಗೆ ಮನೆ–ಮನೆಗೆ ತೆರಳಿ ಮಾಹಿತಿ ಒದಗಿಸಲು ಮತ್ತು ಸ್ವಯಂಸೇವಕ
ರಾಗಿ ಕಾರ್ಯನಿರ್ವಹಿಸುವ ಜಲಸೇನಾನಿಗಳನ್ನು ಮಂಡಳಿ ನೇಮಕ ಮಾಡಿದೆ.
ಮೊದಲ ಹಂತದಲ್ಲಿ 14 ಜಲ ಸೇನಾನಿಗಳನ್ನು ನೇಮಕ ಮಾಡಲಾಗಿದ್ದು, ಇವರು ಯಾವುದೇ ಆರ್ಥಿಕ ಸೌಲಭ್ಯ ಅಪೇಕ್ಷಿಸದೆ ಮಂಡಳಿ ಮತ್ತು ನಾಗರಿಕರ ನಡುವೆ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸಲಿದ್ದಾರೆ. 14 ಜನರಿಗೆ ಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್ ಪ್ರಮಾಣ ಪತ್ರ ವಿತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.