ADVERTISEMENT

ಅಡಿಕೆ ವ್ಯಾಪಾರಿಗೆ ₹ 9.96 ಲಕ್ಷ ವಂಚನೆ

ಮೊಬೈಲ್ ಸ್ವಿಚ್ ಆಫ್‌ ಮಾಡಿಕೊಂಡ ಗುಜರಾತ್‌ನ ವಂಚಕ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 14:20 IST
Last Updated 26 ಫೆಬ್ರುವರಿ 2020, 14:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಕುಮಟಾದ ವರ್ತಕರೊಬ್ಬರಿಂದ 49 ಚೀಲ ಅಡಿಕೆ ತರಿಸಿಕೊಂಡ ಗುಜರಾತ್‌ನ ಕಛ್ ಜಿಲ್ಲೆಯ ಭುಜ್‌ನ ಸಗಟು ವರ್ತಕನೊಬ್ಬ, ಒಟ್ಟು₹9.96 ಲಕ್ಷಮೋಸ ಮಾಡಿದ್ದಾನೆ.

ಸಣ್ಣ ಬಂದರು ರಸ್ತೆಯ ಸುಬ್ರಹ್ಮಣ್ಯ ಭಟ್ ವಂಚನೆಗೊಳಗಾದವರು. ತಮಗಾಗಿರುವ ಮೋಸದ ಬಗ್ಗೆ ಅವರು ಕುಮಟಾ ಪೊಲೀಸರಿಗೆ ಮಂಗಳವಾರ ದೂರು ನೀಡಿದ್ದಾರೆ.

ಅವರಿಗೆ ಕಳೆದ ವರ್ಷ ನವೆಂಬರ್‌ನಲ್ಲಿ ಕರೆ ಮಾಡಿದ್ದ ಶಾ ಹಿತೇಶ ಭಾಯಿಎಂಬಾತ, ‘ನಾನು ಅಡಿಕೆ ಮತ್ತು ಮಾವಾ ಸಗಟು ವ್ಯಾಪಾರ ಮಾಡುತ್ತಿದ್ದೇನೆ.ಭುಜ್‌ನಜಿಐಡಿಸಿ, ಮಾರ್ಕೆಟ್ ಯಾರ್ಡ್ ಎದುರುಸುರಮಧುರ ಸೂಪರ್ ಮಾರ್ಕೆಟ್ ಹೆಸರಿನ ಅಂಗಡಿಯಿದೆ’ ಎಂದು ಪರಿಚಯಿಸಿಕೊಂಡಿದ್ದ.

ADVERTISEMENT

ತನಗೆ 19 ಚೀಲ ಅಡಿಕೆಬೇಕಿದ್ದು, ತನ್ನವಿಳಾಸಕ್ಕೆ ಕಳುಹಿಸುವಂತೆ ಕೇಳಿದ್ದ. ಅಡಿಕೆ ತಲುಪಿದ ಕೂಡಲೇ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿಯೂ ತಿಳಿಸಿದ್ದ.ಅದರಂತೆಸುಬ್ರಹ್ಮಣ್ಯ ಭಟ್, ನ.29ರಂದು ₹ 3.74 ಲಕ್ಷಮೌಲ್ಯದ ಅಡಿಕೆಯನ್ನು ಕಳುಹಿಸಿದ್ದರು. ಬಳಿಕ ಟ್ರಾನ್ಸ್‌ಪೋರ್ಟ್ ಕಂಪನಿ ನೀಡಿದ ಮೂಲ ಬಿಲ್‌ಗಳನ್ನು ಆರೋಪಿಯ ವಿಳಾಸಕ್ಕೆ ಕೊರಿಯರ್ ಮಾಡಿದ್ದರು.

ಆರೋಪಿಯು ಆ ಬಿಲ್‌ಗಳನ್ನು ಟ್ರಾನ್ಸ್‌ಪೋರ್ಟ್ ಕಂಪನಿಗೆ ನೀಡಿಅಡಿಕೆಯ ಚೀಲಗಳನ್ನು ತೆಗೆದುಕೊಂಡು ಹೋಗಿದ್ದ. ಸುಬ್ರಹ್ಮಣ್ಯ ಅವರು ಅಡಿಕೆಗೆಹಣ ಪಾವತಿಸುವಂತೆ ಕೇಳಿದಾಗ ಏನೇನೋ ಸಬೂಬು ನೀಡಿದ್ದ. ಅಲ್ಲದೇ, ತನಗೆ ಇನ್ನೂ 30 ಚೀಲ ಅಡಿಕೆ ಬೇಕು ಎಂದು ಕೇಳಿದ್ದ. ಅಡಿಕೆ ಬಂದ ಕೂಡಲೇಎರಡೂ ಕಂತುಗಳಹಣವನ್ನು ಒಂದೇ ಸಲಕ್ಕೆಕೊಡುವುದಾಗಿದೂರವಾಣಿಯಲ್ಲಿ ತಿಳಿಸಿದ್ದ. ಈ ಬಾರಿಯೂ ಆರೋಪಿಯ ಮಾತು ನಂಬಿದಸುಬ್ರಹ್ಮಣ್ಯ,ಡಿ.7ರಂದು ₹ 6.22ಲಕ್ಷಮೌಲ್ಯದ30 ಚೀಲ ಅಡಿಕೆಯನ್ನು ಕಳುಹಿಸಿದರು.

ಅದನ್ನೂ ‍ಪಡೆದುಕೊಂಡ ವಂಚಕ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಈಗ ಆತನನ್ನು ಪತ್ತೆ ಹಚ್ಚಿ ನ್ಯಾಯ ಕೊಡಿಸುವಂತೆ ಸುಬ್ರಹ್ಮಣ್ಯ ಅವರು ಪೊಲೀಸರ ಮೊರೆ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.