ADVERTISEMENT

ರಾಷ್ಟ್ರಗೀತೆಗೆ ಅಗೌರವ; ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಮೇ 2019, 20:14 IST
Last Updated 8 ಮೇ 2019, 20:14 IST

ಬೆಂಗಳೂರು: ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪದಡಿ ಖಾಸಗಿ ಕಂಪನಿ ಉದ್ಯೋಗಿ ಜಿತಿನ್ ಎಂಬಾತನನ್ನು ಬಂಧಿಸಿದ ಅಶೋಕನಗರ ಪೊಲೀಸರು, ನಂತರ ಠಾಣಾ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ.

ಸಂಜಯನಗರ ಸಮೀಪದ ಜಲದರ್ಶಿನಿ ಲೇಔಟ್ ನಿವಾಸಿಯಾದ ಜಿತಿನ್, ಮಂಗಳವಾರ ಸಂಜೆ 5.30ರ ಸುಮಾರಿಗೆ ‘ಅವೆಂಜರ್ಸ್‌ ಎಂಡ್ ಗೇಮ್’ ಸಿನಿಮಾ ನೋಡಲು ಗರುಡಾ ಮಾಲ್‌ಗೆ ಹೋಗಿದ್ದ. ಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಶುರುವಾದರೂ, ಆತ ಸೀಟು ಬಿಟ್ಟು ಮೇಲೆ ಎದ್ದಿರಲಿಲ್ಲ. ಈ ವರ್ತನೆಯನ್ನು ಪ್ರಶ್ನಿಸಿದ ಪ್ರೇಕ್ಷಕರೊಂದಿಗೂ ಗಲಾಟೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಜಿತಿನ್‌ ವಿರುದ್ಧ ದೂರವಾಣಿನಗರದ ಎಸ್.ಸುಮನ್ ಕುಮಾರ್ ಎಂಬುವರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.