ADVERTISEMENT

ಕಾನ್‌ಸ್ಟೆಬಲ್‌, ಭೂಮಾಪನ ಸಿಬ್ಬಂದಿ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 10 ಮೇ 2020, 17:12 IST
Last Updated 10 ಮೇ 2020, 17:12 IST
ಹಲ್ಲೆಗೊಳಗಾದ ಕಾನ್‌ಸ್ಟೆಬಲ್‌ ಗೋಣೆಪ್ಪ
ಹಲ್ಲೆಗೊಳಗಾದ ಕಾನ್‌ಸ್ಟೆಬಲ್‌ ಗೋಣೆಪ್ಪ   

ಹರಪನಹಳ್ಳಿ: ಲಾಕ್‌ಡೌನ್‌ ಇದ್ದು, ವಿನಾಕಾರಣ ಸಂಚಾರ ಮಾಡಬಾರದು ಎಂದು ತಡೆದು ಹೇಳಿದ ಕಾನ್‌ಸ್ಟೆಬಲ್‌ ಮತ್ತು ಭೂಮಾಪನ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಚೆಕ್‌ಪೋಸ್ಟ್ ಬಳಿ ನಡೆದಿದೆ.

ಕಾನ್‌ಸ್ಟೆಬಲ್ ಗೋಣೆಪ್ಪ ಕಣ್ಣಿಗೆ ಗುದ್ದಿ, ಕೈ ಕಚ್ಚಿದ್ದು, ತಡೆಯಲು ಹೋದ ಗೃಹರಕ್ಷಕ ದಳದ ಸಿಬ್ಬಂದಿ ರಾಜಪ್ಪ, ಗಣೇಶ್ ಅವರ ಮೇಲೂ ಹಲ್ಲೆ ನಡೆದಿದೆ.

ಚೆಕ್‌ಪೋಸ್ಟ್‌ ಮೂಲಕ ಹೋಗುತ್ತಿದ್ದದೇವರ ತಿಮ್ಲಾಪುರ ಗ್ರಾಮದ ಜಟ್ಲೆಪ್ಪರ ವೆಂಕಟೇಶ, ಅಭಿಲಾಷ್ ಹಲ್ಲೆ ಮಾಡಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

ಗೋಣೆಪ್ಪ ಅವರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.