
ಪ್ರಜಾವಾಣಿ ವಾರ್ತೆ
ನವದೆಹಲಿ: ‘ದೆಹಲಿ ಚಲೋ ಅಭಿಯಾನಕ್ಕೆ ಬರುತ್ತಿದ್ದ ಕರ್ನಾಟಕದ ರೈತರ ಮೇಲೆ ಭೋಪಾಲ್ ಬಳಿ ದೌರ್ಜನ್ಯ ನಡೆಸಿ ಬಂಧಿಸಲಾಗಿದೆ. ಇದು ರಾಕ್ಷಸಿ ಕೃತ್ಯ’ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ‘ದೆಹಲಿ ಚಲೋದಲ್ಲಿ ಭಾಗಿಯಾಗಲು ರಾಜ್ಯದ ನೂರಾರು ರೈತರು ಹೊರಟಿದ್ದರು. ಅವರನ್ನು ಭೋಪಾಲ್ ಬಳಿ ರೈಲಿನಲ್ಲಿ ಮಧ್ಯರಾತ್ರಿ ಹೊತ್ತಿನಲ್ಲಿ ಎಳೆದಾಡಲಾಗಿದೆ. ಈ ವೇಳೆ, ಕೆಲವು ಮಹಿಳೆಯರಿಗೆ ಗಾಯಗಳಾಗಿವೆ. ರೈತರ ಚಳವಳಿ ಹತ್ತಿಕ್ಕಲು ಕೇಂದ್ರ ಸರ್ಕಾರ ಪೊಲೀಸ್ ಬಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಪೊಲೀಸರು ಗೂಂಡಾಗಿರಿ’ ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.